ನಾವಿಲ್ಲಿ ಯಾತ್ರಿಕರು..

ನಾಳೆ ಮುಗಿಯುವ ಈ ವಿಶ್ವದಲ್ಲಿ,
ನಲಿದಾಡುವ ನಾವೆಲ್ಲಾ ಯಾತ್ರಿಕ..
ಮೂರು ದಿನಗಳ ಈ ಬದುಕಿನಲ್ಲಿ,
ಮನುಜನಾಗುತ್ತಿದ್ದಾನೆ ಮಾಂತ್ರಿಕ..

ನಾಳೆಯ ಬಗ್ಗೆ ತಿಳಿಯದ ನಾವಿಲ್ಲಿ,
ಭಾವಿಸಿರುವೆವೋ ಇದು ಶಾಶ್ವತ..!
ಇಂದಲ್ಲದಿರೆ ನಾಳೆಯೊಂದು  ದಿನ,
ಮರಳಿ ಹೋಗಲೇಬೇಕದು ನಿಶ್ಚಿತ..

ನಮ್ಮೀ ಜೀವನದ  ಯಾತ್ರೆಯಲ್ಲಿ,
ಈ ವಿಶ್ವವು ಒಂದು ಸಣ್ಣ ನಿಲ್ದಾಣ..!
ಮತ್ತೆ ನಾವು  ಅಲ್ಲಿಗೇ ತೆರಳಬೇಕು,
ಎಂಬುದು ಮೇಲಿನವನ ವಾಗ್ಧಾನ..

ಭೂಮಿಯೆಂಬೀ ತಂಗುದಾಣದಲ್ಲಿ,
ಮಾನವನಾಗುತ್ತಿದ್ದಾನೆ ಅಹಂಕಾರಿ..
ಆಸೆ, ಅಭಿಲಾಷೆಗಳನ್ನೆಲ್ಲಾ ಇವನು,
ಮಡಿಲಲ್ಲಿ ಕಟ್ಟುವನು, ಎಲ್ಲೆ ಮೀರಿ..

ಅರಸನಾದವನೂ, ಆಳಾದವನೂ,
ಮರಳಬೇಕಾದ ಜಗತ್ತದು ಒಂದೇ..
ತಯ್ಯಾರುಗೊಳ್ಳಬೇಕು ನಾವೆಲ್ಲಾ,
ಆ ಲೋಕಕ್ಕೆ  ಮರಳಲು ಇಂದೇ..

ಯಾತ್ರಿಕನಾಗಿ ನಮ್ಮೆಲ್ಲರ ಇಲ್ಲಿಗೆ
ಕಳುಹಿದನು ಅವನು ಪರಮಾತ್ಮ..
ಇನ್ನಾದರೂ ಎಚ್ಚರವಾಗೆದ್ದೇಳಲಿ,
ಮನಸ್ಸಿನ ಒಳಗಿರುವ ನಮ್ಮಾತ್ಮ..

🔵 http://suwichaar.blogspot.in 🔵

✍ ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!