ಕರುನಾಡು..
ಕನಸಿನ ಗೋಪುರವಿದು..
ಕಾವೇರಿಯ ಜಂಗಮವಿದು..
ಕಿರಿಯ-ಹಿರಿಯ ಸೌಹಾರ್ದಕ್ಕೆ
ಕೀರ್ತಿ ದೊರಕಿದ ನಾಡಿದು...
ಕುಂಮುಮ-ಅರಶಿನ ಬಣ್ಣಗಳಿಂದ
ಕೂಡಿದ ದಿವ್ಯ ಪತಾಕೆಯ ಬೀಡಿದು..
ಕೃಷಿಯಲ್ಲೇ ಬದುಕ ಸಾಗುವವರ,
ಕೆತ್ತನೆಯ ಕಲೆಯ ತವರೂರಿದು..
ಕೇಳಿರಯ್ಯಾ ಕೇಳಿರಿ..
ಕೈ ಮುಗಿದು ಬೇಡಿರಿ..
ಕೊಲೆ-ಸುಲಿಗೆಗಳಿಂದ
ಕೋಟಿ ಜನರಿಗೆ ರಕ್ಷಣೆಯನ್ನು..
ಕೌಮಾರ್ಯ ಪ್ರಶೋಭೆಯಿಂದ,
ಕಂಗೊಳಿಸುತ್ತಿರುವ ಕರುನಾಡಿದು..
suwichaar.blogspot.in
#ಹಕೀಂ ಪದಡ್ಕ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou