ಪೋಸ್ಟ್‌ಗಳು

ಜೂನ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಸಾವು ಅನ್ಯಾಯವಾಗಿತ್ತು..

ಇಮೇಜ್
ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗನನ್ನು ಪೋಲೀಸರು ಅಮಾನುಷವಾಗಿ ಹಲ್ಲೆಗೈದು ಕೊಂದಿರುವ ವಿಚಾರ ಇವತ್ತು ಬಹಳಷ್ಟು  ಚರ್ಚೆಯಾಗುತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘನೆಯ ವಿಷಯವಾಗಿ ಜಯರಾಜ್ ಎಂಬ ವರ್ತಕನನ್ನು  ಪೋಲೀಸರು ಬಂಧಿಸಿ, ಹೀನಾಯವಾಗಿ ಹಿಂಸಿಸುತ್ತಾರೆ. ಅದನ್ನು ಪ್ರಶ್ನಿಸಲು ಬಂದ ಮಗ ಬೆನಿಕ್ಸ್ ನನ್ನೂ ಕೂಡ ಪೋಲೀಸರು ಕ್ರೂರವಾಗಿ ದೌರ್ಜನ್ಯವೆಸಗಿ ಸಾವಿನ ಕಡೆಗೆ ತಳ್ಳುತ್ತಾರೆ. ಹಲ್ಲೆಯ ಕ್ರೂರತೆ ಹೇಗಿತ್ತೆಂದರೆ, ಗುದದ್ವಾರದೊಳಗೂ ಲಾಠಿಯನ್ನು ತುರುಕಿಸಿ ಬಹಳ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಮೊಣಕಾಲಿನ ಚಿಪ್ಪು ಒಡೆದು ರಕ್ತ ಧಾರಾಕಾರವಾಗಿ ಹರಿಯುತ್ತಿದ್ದರೂ ಎಳ್ಳಷ್ಟೂ ಕರುಣೆ ತೋರದ ಪೋಲೀಸರು ಕೊನೆಗೆ ಇಬ್ಬರ ಸಾವಿನಲ್ಲಿ ಮುಗಿಸುತ್ತಾರೆ. ತೂತುಕುಡಿ ಎಂದಾಕ್ಷಣ ನಮಗೆ ಬೇಗನೇ ನೆನಪಿಗೆ ಬರುವ ಘಟನೆಯೆಂದರೆ, 2018 ರ ಮೇ ತಿಂಗಳ ಆ ದುರಂತ. 1998 ರಲ್ಲಿ ನಿರ್ಮಾಣವಾದ ಕಾಪರ್ ಸ್ಮೆಲ್ಟರ್ ಪ್ಲಾಂಟ್ ನ್ನು ವಿರೋಧಿಸಿ ಅಲ್ಲಿನ ಜನ ಬೀದಿಗಿಳಿದಿದ್ದರು. ಆರಂಭದಲ್ಲೇ ಹೋರಾಟಗಳು ನಡೆದಿದ್ದರೂ ಕೂಡ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಮುಂದಕ್ಕೆ 2018 ರಲ್ಲಿ ಒಂದು ಕ್ರಾಂತಿ ಹುಟ್ಟಿಕೊಂಡಿತ್ತು. ಆ ಪ್ಲಾಂಟ್ ನ ವಿರುದ್ಧದ ಶಬ್ಧದ ತೀವ್ರತೆ ಕಾರ್ಪೊರೇಟ್ ಕಂಪೆನಿಗೆ ಬಹುದೊಡ್ಡ ಸವಾಲಾಗಿತ್ತು. ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ಬಂದಾಗ ಪೋಲೀಸರು ಅಧಿಕಾರಿಗಳ ಒತ್ತಡಕ್ಕೆ ಮಣಿದು ಗುಂಡಿನ ...

ಚೀನಾ; ಬಾಯ್ಕಾಟ್ ಮಾಡುವ ಮುನ್ನ

ಇಮೇಜ್
ಕಳೆದ ವಾರ ಗಾಲ್ವನ್ ನದಿ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಗಡಿ ಪ್ರದೇಶಕ್ಕೆ ಸಂಬಂಧಿಸಿದ ಕದನದಲ್ಲಿ 20 ರಷ್ಟು ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೀನಾ ಮತ್ತು ಭಾರತದ ನಡುವೆ ಸಂಘರ್ಷ ಇದೇ ಮೊದಲಲ್ಲ, ಈ ಹಿಂದೆ 1999 ರ ಕಾರ್ಗಿಲ್ ಯುದ್ಧದ ನಂತರ, 1962 ಮತ್ತು 1967 ರಲ್ಲೂ ಭಾರತ - ಚೀನಾ ಕದನ ನಡೆದಿತ್ತು ಮಾತ್ರವಲ್ಲ ಅನೇಕ ಸೈನಿಕರು ಪ್ರಾಣತೆತ್ತಿದ್ದರು.  ಈ ವಿಚಾರವಾಗಿ ಚರ್ಚೆಗಳು ಮುಂದುವರಿಯುತ್ತಿದ್ದಾಗ, ಯಾಕಾಗಿ ಈ ಕದನವಾಯ್ತು ಎಂಬುದರ ಕುರಿತು ನಿಖರ ಮಾಹಿತಿಯಿಲ್ಲ. ಕೆಲವೊಂದು ಮೂಲಗಳ ಪ್ರಕಾರ ಚೀನಾವು ಭಾರತದ ಭೂಪ್ರದೇಶವನ್ನು ಆಕ್ರಮಿಸಿದ ಕಾರಣ ಭಾರತೀಯ ಸೈನಿಕರು ತಡೆದುದೇ ಗಲಭೆಗೆ ಕಾರಣವೆಂದು ಹೇಳುತ್ತಿದ್ದಾದರೂ, ಈ ವಿಷಯಕ್ಕೆ  ಸಂಬಂಧಿಸಿ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ಚೀನೀ ಸೈನಿಕರು ಭಾರತದೊಳಗೆ ನುಸುಳಲಿಲ್ಲ ಎಂದು ಪ್ರಸ್ತಾಪಿಸಿದ್ದು ಇನ್ನಷ್ಟು ಗೊಂದಲಕ್ಕೀಡಾಗಿಸಿದೆ. ಭಾರತ ಮತ್ತು ಚೀನಾ ದ ನಡುವೆ ಗಡಿ ವಿವಾದಗಳು ಇನ್ನೂ ನೆಲೆಸಿರುವುದರಿಂದ ಈ ರೀತಿಯ ಕದನಗಳು ನಡೆಯುತ್ತಿದೆ. ಈ ವಿವಾದವನ್ನು ಇತ್ಯರ್ಥಗೊಳಿಸಲು ಇನ್ನೂ ಸಾಧ್ಯವಾಗಲಿಲ್ಲ ಎಂಬುದರ ಕುರಿತು ಭಾರತೀಯರು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲದರ ನಡುವೆ ಒಂದಷ್ಟು ತಮಾಷೆಯಾಗಿ ಮತ್ತು ಗಂಭಿರವಾಗಿ ಕಂಡ ಒಂದು ವಿಚಾರವೆಂದರೆ 'ಬಾಯ್ಕಾಟ್ ಚೀನಾ' ಎಂಬ ಅಭಿಯಾನ. ಭ...

ಆ ಶ್ವಾಸವನ್ನು ಇಡೀ ಊರೇ ಉಸಿರಾಡಿದೆ..

ಇಮೇಜ್
ನಿನ್ನೆ ಪಾಣೆಮಂಗಳೂರಿನ ಗೂಡಿನಬಳಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿಶಾಂತ್ ಎಂಬವನನ್ನು ಜೀವದ ಹಂಗು ತೊರೆದು ನೀರಿಗೆ ಧುಮುಕಿ ರಕ್ಷಿಸಲು ಮುಂದಾದ ಘಟನೆ ಬಹಳ ಸುದ್ದಿಯಾಗಿದೆ. ಕೊರೋನಾ ಎಂಬ ಮಹಾಮಾರಿಯಿಂದ ಜಗತ್ತು ತತ್ತರಿಸಿ ಹೋಗಿರುವ ಪ್ರಸ್ತುತ ಸಂದಿಗ್ಧ ಪರಿಸ್ಥಿಯಲ್ಲಿ ಸರಳ ಈದ್ ನ ಆಚರಣೆಯಲ್ಲಿ ಮಗ್ನರಾಗಿದ್ದ ಯುವಕರು ಹತಾಶೆಯ ಜೀವನ ಕೊನೆಯಾಗಿಸಲು ನೀರಿಗೆ ಹಾರಿದ ಯುವಕನಿಗೆ ಜೀವ ಕೊಡಲು ಯಾವುದೇ ಮುಜುಗರವಿಲ್ಲದೇ ಕೃತಕ ಉಸಿರಾಟದ ಕಾರ್ಯ ಮಾಡುವಾಗ ಈಗಾಗಲೇ ಕೋಮುಸೂಕ್ಷ್ಮ ಪ್ರದೇಶ ಅಂತ ಗುರುತಿಸಿಕೊಂಡಿರುವ ಮಂಗಳೂರು ಎಷ್ಟೊಂದು ಕಾಳಜಿಯುಕ್ತವಾಗಿದೆ ಅನ್ನಿಸಿದೆ. ಆದರೂ ಈ ಯುವಕರ ತಂಡ ನಿಶಾಂತ್ ನನ್ನು ರಕ್ಷಿಸುವಲ್ಲಿ ವಿಫಲವಾದರು. ಆದರೆ, ಅವನೊಬ್ಬ ಬಾಯಿಗೆ ಬಾಯಿಟ್ಟು ನೀಡಿದ ಶ್ವಾಸ ಇಂದು ಮಂಗಳೂರಿನ ಜನತೆ ಉಸಿರಾಡುತ್ತಿದ್ದಾರೆ. ಹಲವು ಮಗ್ಗುಲಲ್ಲಿ ನಿರ್ದಿಷ್ಟ ಸಮುದಾಯವನ್ನು ಆರೋಪಿ ಸ್ಥಾನದಲ್ಲಿರಿಸಿ ಬೆರಳು ತೋರಿಸುತ್ತಾ, ಧರ್ಮ-ಧರ್ಮಗಳ ನಡುವಿನ ಸಾಮರಸ್ಯವನ್ನು ಕೆಡವಲು ಸಂಘಪರಿವಾರ ಮತ್ತು ಅದರ ಹಿನ್ನೆಲೆಯಲ್ಲಿರುವ ಮಾಧ್ಯಮಗಳು ಪ್ರಯತ್ನಿಸುತ್ತಲೇ ಬಂದಿದೆ. ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿಚರವಾಗಿ, ಆನಂತರ ಕೋವಿಡ್-೧೯ ವಿಷಯದಲ್ಲೂ ಧರ್ಮದ ಬಣ್ಣ ಬಳಿದು ಜನರ ಮನಸ್ಸಿಗೆ ವಿಷ ತುಂಬಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಕೂಡ. ಇಂತಹ ಪರಿಸ್ಥಿತಿಯಲ್ಲೂ ಒಬ್ಬ ಯುವಕನ ಪ್ರಾಣ ಕಾಪಾಡಲು ಹರಸಾಹಸಪ...

ಇದು ದುರಂತಗಳ ಕಾಲ..

ಇಮೇಜ್
ಕೊರೋನಾ ಕಾಲದ ಸಂದಿಗ್ಧ ಪರಿಸ್ಥಿತಿಯು ಮುಂದುವರಿಯುತ್ತಿದ್ದಂತೆ ಭಾರತದಲ್ಲೂ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತಿದೆ. ಲಾಕ್ ಡೌನ್ ಕಾರಣವಾಗಿ ಉದ್ಯೋಗ ಕಳೆದುಕೊಂಡು ಆಹಾರಕ್ಕಾಗಿ ಪರಿತಪಿಸಬೇಕಾಗಿ ಬಂದಿದ್ದು, ಊರಿಗೆ ಮರಳಲಾಗದೇ ನಡುರಸ್ತೆಯಲ್ಲಿ ಬಾಕಿಯಾದ ಕಾರ್ಮಿಕರ ಅಳಲು, ಹಸಿವಿನಿಂದ ಬಳಲಿ ಸಾವನ್ನಪ್ಪಿದ ಘಟನೆ.. ಹೀಗೆ ಪ್ರತಿಯೊಂದು ಅಮಾನವೀಯ ಸನ್ನಿವೇಶಗಳು ಕಣ್ಣ ಮುಂದೆ ಹಾದು ಹೋಗುತ್ತಿದೆ. ದೇಶದ ಆರ್ಥಿಕ ಮಟ್ಟವನ್ನೂ ಕೊರೋನಾ ಎಂಬ ಮಹಾಮಾರಿಯು ಪಾತಾಳಕ್ಕಿಳಿಸಿದ್ದು ದೇಶದ ಪ್ರತಿಯೊಂದು ಉದ್ಯಮಗಳಿಗೂ ಇದರ ಪ್ರಭಾವ ಬಾಧಿಸಿದೆ. ಈ ದುರಂತ ಕಾಲವು ಇನ್ನೂ ಮುಂದುವರಿಯುವ ಬಗ್ಗೆ ಆತಂಕಗಳು ಎದುರಾಗುತ್ತಿದೆ.  ಇದಕ್ಕೆ ಪೂರಕವೆಂಬಂತೆ ಮಿಡತೆಗಳ ಆಕ್ರಮಣವು ದೇಶದ ಸ್ಥಿತಿಗತಿಯನ್ನು ಮತ್ತೆ ಕಂದಕಕ್ಕೆ ತಳ್ಳಿದೆ‌. ಆಫ್ರಿಕಾ, ಒಮಾನ್ ಮತ್ತು ಪಾಕಿಸ್ತಾನದಲ್ಲಿ ಕಂಡುಬಂದ ಈ ಮಿಡತೆಗಳ ಆಕ್ರಮಣ ಭಾರತಕ್ಕೂ ಲಗ್ಗಯಿಟ್ಟಿದೆ.  ವಾತಾವರಣದಲ್ಲಿ ಉಂಟಾಗುವ ಏರುಪೇರುಗಳು ಇವುಗಳ ಪ್ರಜನನಕ್ಕೆ ಅನುಕೂಲಕರವಾದಲ್ಲಿ ಮಿಡತೆಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಸುತ್ತದೆ. ಒಳ್ಳೆಯ ಮಳೆ ಸಂಭವಿಸುವುದರಿಂದ ಇವುಗಳಿಗೆ ಮರುಭೂಮಿಯಲ್ಲಿ ಮೊಟ್ಟೆಯಿಡಲು ಅನುಕೂಲವಾದ ಸಸ್ಯಗಳು ಬೆಳೆದು ಹೋಪರ್ ಡೆವಲಪ್ಮೆಂಟ್ ಘಟಕ್ಕೆ ಸಹಕಾರಿಯಾಗುತ್ತದೆ. ಎತೋಪ್ಯಾ, ಸೋಮಾಲಿಯಾ, ಎರಿತ್ರಿಯ, ಆಫ್ರಿಕಾದ ಕೆಲವು ಪ್ರದೇಶಗಳು, ಪಾಕಿಸ್ತಾನದ ಬಲೂಚಿಸ್ತಾನ್ ಜೊತೆಗೆ ಯಮನ್, ಒಮಾನ್ ...

ಕಾರ್ಮಿಕನ ಪಾಡು..

ಇಮೇಜ್
ಹಸಿವ ಗೂಡೊಳಗೆ ಬದುಕಿದವನಿಗೆ ಬಿರುಕುಬಿಟ್ಟ ಪಾದದ ನೋವು ಅಷ್ಟೇನೂ ಕಠಿಣವಲ್ಲ ದಿನವಿಡೀ ಹೊರುವ ಭಾರ ದಿನ ಜಂಜಾಟದ ಸಮಸ್ಯೆಗಳಷ್ಟು ತೂಕವಿಲ್ಲ ಸುಡುಬಿಸಿಲಿಗೆ ಸುಕ್ಕುಗಟ್ಟಿದ ಮುಖದ ಛಾಯೆಗೆ ಜೋಪಡಿಯೂ ಅಣಕಿಸಿತು ತುತ್ತು ಅನ್ನದ ಹಂಬಲಕೆ ದಿನದ ಬೆವರೂ ಬೆವರಿತು ಹೊಟ್ಟೆಗೆ ಕೈಯಿಟ್ಟು ಕೂಗುವ ಕರುಳ ಕುಡಿಗಳ ನೋವಿನ ತೀವ್ರತೆ ಕಟ್ಟು ಹೊತ್ತ ದಣಿವಿಗಿಲ್ಲ ಸಿಗುವ ಮೂರು ಚಿಕ್ಕಾಸಿನಲಿ ಕ್ಷಾಮ ಬದುಕಿಗೆ ತಿಲಾಂಜಲಿಯಿಲ್ಲ ಸುಟ್ಟು ಹೋದ ಜೀವನದಲಿ ಏಳು ಮಾಳಿಗೆಯ ಕನಸಿಲ್ಲ ಹಸಿವು ಮಾಸಿದರೆ ಸಾಕು ಒಳಿತು ಬಯಸುವಾಗ ವಿಶ್ರಾಂತಿಯ ಬಯಕೆಗೆ ಮಣ್ಣು ನೆಲವೇ ಧಾರಾಳ ಉಸಿರು ಸಾಯುವವರೆಗೆ ಬದುಕು ಬರೆಗಳು ಬೋಜನ ಉಪವಾಸ ಅಭ್ಯಾಸವಾದವನಿಗೆ ತುಂಡು ರೊಟ್ಟಿಯೂ ಪಾವನ -ಹಕೀಂ ಪದಡ್ಕ

ಒಂದು ಆನೆ ಮತ್ತು ಸಾಮಾಜಿಕ ಮಾಧ್ಯಮ..

ಇಮೇಜ್
ನಾವು(ನು) ಬಹಳಷ್ಟು ಆತುರದಿಂದಿದ್ದೇವೆ.. ನಿನ್ನೆ ದಿನ ಸಾಮಾಜಿಕ ತಾಣಗಳಲ್ಲಾದ್ಯಂತ ಅತೀ ಹೆಚ್ಚು ವಿಮರ್ಶಿಸಲ್ಪಟ್ಟ ಒಂದು ಆನೆಯ ಮರಣದ ವಿಚಾರದ ಸತ್ಯಾಸತ್ಯತೆ ಹೊರಬಂದಾಗ ನನ್ನ ನಡೆಯ ಬಗ್ಗೆಯೂ ಖೇದ ಉಂಟಾಗಿದೆ. ಯಾವುದೇ ವಿಚಾರದ ಹಿಂದೆ-ಮುಂದೆ ನೋಡದೇ ಅಚಾತುರ್ಯದಿಂದ ಪ್ರತಿಕ್ರಿಯಿಸುವ ನಮ್ಮ ನಡೆಯೇ ಬಹಳ ಅಪಾಯಕಾರಿ ಎಂಬ ಪ್ರಬುದ್ಧ ಸಂದೇಶವನ್ನು ನಿನ್ನೆ ಸುದ್ದಿಯಾದ ಆನೆ ತಿಳಿಸಿಕೊಟ್ಟಿದೆ ಅನ್ನಬಹುದು. ಮೂರು ದಿನಗಳ ಹಿಂದೆ ಪಾಲಕ್ಕಾಡ್- ಮಲಪ್ಪುರಂ ಗಡಿಭಾಗದಲ್ಲಿ ಗರ್ಭಿಣಿ ಆನೆಯೊಂದು ಆಹಾರ ಹುಡುಕಿ ಬಂದು ಸ್ಪೋಟಕ ತುಂಬಿಸಿಟ್ಟ ಅನಾನಸ್ ಒಂದನ್ನು ತಿಂದಾಗ ಅದು ಸ್ಪೋಟಗೊಂಡು ಬಾಯಿಯನ್ನು ಸುಟ್ಟಿತ್ತು. ನೋವಿನಿಂದ ಓಡುತ್ತಾ ಅದು ಮಲಪ್ಪುರಂ ನ ವಾಲಯಾರ್ ನದಿಗೆ ಇಳಿದು ಸಾವು-ಬದುಕಿನ ನಡುವೆ ಹೋರಾಟ ನಡೆಸಿ, ಮೂರು ದಿನಗಳ ಬಳಿಕ ಈ ವಿಚಾರ ತಿಳಿದ ಅರಣ್ಯ ಇಲಾಖೆಯು ಅದನ್ನು ರಕ್ಷಿಸುವಲ್ಲಿ ಮಾಡಿದ ಕೊನೆಯ ಪ್ರಯತ್ನವೂ ವಿಫಲವಾಯ್ತು. ಇದಾಗಿತ್ತು ಸುದ್ದಿ. ಬಹುಶಃ ಬಹಳ ಅಮಾನವೀಯ ಘಟನೆಯೇ ಇದು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಾನೂ ಸೇರಿದಂತೆ ಬಹುತೇಕ ಮಂದಿ ಬೇಸರ ವ್ಯಕ್ತಪಡಿಸುತ್ತಾ, ಕೇರಳವನ್ನು ವಿಮರ್ಶಿಸಿ, ಮನುಷ್ಯರು ರಕ್ಕಸರು ಎಂಬ ರೀತಿಯಲ್ಲೆಲ್ಲಾ ಪ್ರತಿಕ್ರಿಯೆಗಳನ್ನು ನೀಡಿದ್ದರು. ಸಾಮಾಜಿಕ ತಾಣದಲ್ಲಿ ಇದು ಬಹಳಷ್ಟು ಚರ್ಚೆಯಾಗಿದೆ.  ಆದರೆ ನಾವು ಎಡವಿದ್ದು ಎಲ್ಲಿಯೆಂದರೆ, ಘಟನೆಯ ವಾಸ್ತವತೆ ತಿಳಿಯದೇ ಪ್ರತಿಕ್ರಿಯಿಸಿದ್ದು. ಅದ...

ಒಂದು ಭಾಷಣದ ಸುತ್ತ..

ಇಮೇಜ್
ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಕೊರೋನಾ ಎಂಬ ಮಾರಕ ವೈರಸ್ ಭಾರತೀಯ ಜನೆತಯಲ್ಲೂ ತಲ್ಲಣ ಮೂಡಿಸಿದೆ. ಈಗಾಗಲೇ 200 ರಷ್ಟು ಕೊರೋನಾ ಸೋಂಕಿತರು ಭಾರತದಲ್ಲಿ ನಿರೀಕ್ಷಣೆಯಲ್ಲಿದ್ದು ಎರಡು ಜೀವವನ್ನೂ ಕಳೆದುಕೊಂಡಿದ್ದೇವೆ. ಚೈನಾದಲ್ಲಿ ಮೊಳಕೆಯೊಡೆದ ಈ ವೈರಸ್ ಅಲ್ಲಿನ ಇಡೀ ಜೀವನಶೈಲಿಯನ್ನೇ ದಿಕ್ಕುಪಾಲಾಗಿಸಿ ವಿಶ್ವವ್ಯಾಪಿ ಹರಡುತ್ತಿದೆ. ಈಗ ಚೀನಾ ಅಲ್ಪಸ್ವಲ್ಪ ಚೇತರಿಸಿಕೊಳ್ಳುತ್ತಿದ್ದರೂ ಇಟಲಿ ಸೇರಿದಂತೆ ಇತರ ರಾಷ್ಟ್ರಗಳು ಕೊರೋನ ಎಂಬ ಈ ಮಹಾಮಾರಿ ವೈರಸ್ ನ ಆರ್ಭಟಕ್ಕೆ ಸಿಲುಕಿಕೊಂಡಿದೆ. ಭಾರತವೂ ಕೊರೋನಾ ದಾಳಿಗೆ ತುತ್ತಾಗಿರುವಾಗ ಈ ಬಗ್ಗೆ ಪ್ರಧಾನಿ ಮೋದೀಜಿಯವರ ನಿನ್ನೆ ನಡೆಸಿದ ಭಾಷಣದ ಬಗ್ಗೆ ಚರ್ಚೆಗಳು ಮುಗಿಲುಮುಟ್ಟಿದೆ‌. ಪರ-ವಿರೋಧ ಚರ್ಚೆಗಳು ಮೋದಿ ಭಾಷಣದ ಕುರಿತಾಗಿ ಪ್ರಸ್ತಾವಿಸಲ್ಪಟ್ಟರೂ ಸರಕಾರದ ಹಾಗೂ ಪ್ರಧಾನಿಗಳ ವೈಫಲ್ಯತೆಯು ಆ ಭಾಷಣದಲ್ಲಿ ವ್ಯಕ್ತವಾಗಿದೆ. ಸೌದಿ ಅರೇಬಿಯಾ, ಯುಎಇ, ಕತರ್ ಹಾಗೂ ಇನ್ನಿತರ ಗಲ್ಫ್ ರಾಷ್ಟ್ರಗಳೂ ಈ ಕೊರೋನಾದಿಂದ ಪಾರಾಗಲು ಅತ್ಯುತ್ತಮ ರೀತಿಯ ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿರುವಾಗ ಇತ್ತ ಭಾರತದ ಪ್ರಧಾನಿ ಜನರೊಂದಿಗೆ ಮನೆಯೊಳಗೆ ಕುಳಿತು ಚಪ್ಪಾಳೆ ತಟ್ಟಿ ಗಂಟೆ ಭಾರಿಸಿ ವೈರಸನ್ನು ತಡೆಗಟ್ಟಬೇಕು ಎನ್ನುವ ಬುದ್ಧಿಹೀನ ಸಲಹೆಯಿಂದ ಭಾರತದ ಗೌರವವನ್ನು ಬೆತ್ತಲಾಗಿಸಿದೆ.  ಈಗಾಗಲೇ ಸರ್ಕಾರದ ಸರ್ವಾಧಿಕಾರದ ನಡೆಗಳಿಂದಾಗ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿ ತೀರಾ ಹದಗೆಟ್ಟಿದ್ದು, ನೋಟ್ ಬ್ಯಾನ್...

ಸಿಗರೇಟು ಕವಿತೆ

ಇಮೇಜ್
ನೆನಪುಗಳೇ ಹಾಗೇ ಆಗಾಗ ತುಟಿ ಸವರುವ ಸಿಗರೇಟಿನಂತೆ ಎದೆಯೊಳಗೆ ಸದ್ದು ಮಾಡುತ್ತಲೇ.. ಒಂದು ಮುಗಿದಾಗ ಮತ್ತೊಂದು ಹೊತ್ತಿದ ಸಿಗರೇಟು ಜೀವವನು ಹಿಂಡುವಂತೆ ನೆನಪುಗಳು ಮನಸ್ಸನ್ನು ಕೆದಕುತ್ತಲೇ ಇದೆ ಕಲ್ಲು ಬಂಡೆಯ ಮೇಲಿನ ಕೆತ್ತನೆಯಂತೆ.. ಹೊಗೆಯ ಜತೆಗೆ ನೆನಪುಗಳನ್ನೂ ಹೊರದಬ್ಬಬೇಕೆಂದಿರುವೆ, ಮಾತು ಕೇಳದೇ ಅಲ್ಲಲ್ಲಿ ಅಎಗಿ ಕುಂತಿವೆ, ಮನಸಿನ ನೆರಳು ಈ ಹುಚ್ಚು ನೆನಪುಗಳನೆಲ್ಲಾ ಅಳಿಸಿ ಹಾಕಲು ಹಚ್ಚಿದ ಸಿಗರೇಟಿಗೆ ಲೆಕ್ಕವಿಲ್ಲ ನೋಯಿಸಲೆಂದೇ ಹುಟ್ಟಿಕೊಂಡವವು ಸೋಲೊಪ್ಪಿ ತೆಪ್ಪಗಿರುವೆ -ಹಕೀಂ ಪದಡ್ಕ

ನೋವು..

ಇಮೇಜ್
ಬರೆಯ ಮೇಲೆ ಮತ್ತೆ ಮತ್ತೆ ಚುಚ್ಚುವ ಈ ಘೋರ ಬದುಕೇ ನರಕದ ಹಾದಿ ತಿದ್ದಿದ ತಪ್ಪಿಗೂ ಒದ್ದುವ ಕಾಲದಲಿ ನರಳಿ ಹೊರಳಿ ಸಾಗುತಿರುವೆ ಓಡೋಡಿದಷ್ಟೂ ಮತ್ತೂ ನೆರಳಿನ ಜೊತೆಯೇ ಬೆನ್ನಟ್ಟುವ ಸಮಸ್ಯೆಗಳ ರಾಕ್ಷಸನೇ ಎಲ್ಲಿ ನಿನ್ನ ಸಾವು..!? ಬದುಕುವ ಹಂಬಲದಿ ಹುಟ್ಟಿದ ನಾನು ಸಾವನು ಬೇಡುವಂತಾದೆ ಹುಟ್ಟೇ ತಪ್ಪೆಂಬ ಮಾತು ಮನದೊಳಗೆ ಮಾರ್ಧ್ವನಿಸುತಿದೆ ಸಾಲು ಸಾಲಾಗಿ ವಲಸೆ ಕೂರುವ ದುಃಖಗಳಿಗೆ ವಿದಾಯವಿಲ್ಲ ಬದುಕೇ ಅನರ್ಥವೆಂದು ಅರಿವಾದಾಗ ಕೊನೆಯೆಳೆದು ಹೋಗುವುದಲ್ಲದೆ ಬೇರೆ ಉಪಾಯವಿಲ್ಲ.. -ಹಕೀಂ ಪದಡ್ಕ

ಕೊನೆಯಲ್ಲಿ..

ಇಮೇಜ್
ಬದುಕಿನ ಕೊನೆಯ ನೋಡಲು ಕಾತರಿಸುವ ಹೃದಯ ನಿನ್ನೆಯ ನೆನಪಿಸಿ ಅಳುತಿದೆ ನಂಬಿಕೆಯ ನಾಳೆಗಳಿಗಾಗಿ ಮತ್ತೆ ಕಣ್ಣೊರೆಸುತ್ತಾ ಉಸಿರುವ ಪ್ರತೀ ಗಾಳಿಯೊಡನೆ ಸಮಸ್ಯೆಗಳೂ ಹೊರೆಯೇ ಮುಗಿಯದ ದಾರಿಯ ಪಯಣ ಆರದ ದಣಿವಿನ ಪ್ರಮಾಣ ಮತ್ತೆ ಸಾವು ಬಯಸಿದೆ ಕಾಣದ ಭವಿಷ್ಯಕೆ ಈಗಲೇ ಕೂಡಿಡುವವರ ಮಧ್ಯೆ ಇಂದಿನದ್ದೇ ಚಿಂತೆ ನಿದ್ದೆ ಸುಳಿಯದ ಇರುಳಲಿ ಹಸಿವಿಗೆ ಪರಿಹಾರ ಹುಡುಕಾಟ ಬಲ ನೀಡಿ ದೂಡಿದರೂ ಮುಂದೆ ಚಲಿಸದ ಜೀವನ ಬಂಡಿ ಮನದ ಸ್ಥೈರ್ಯ ಕಳೆಯುತಿದೆ ಗತಿ ಬದಲಾಗದ ಬದುಕಿಗೆ ನೊಂದು ನೇಣು ಮಾತನಾಡಿದೆ. -ಹಕೀಂ ಪದಡ್ಕ

ನಾವು ಎಡವುತ್ತಿರುವುದೆಲ್ಲಿ..?

ಇಮೇಜ್
ನಾವು ಮತ್ತೆ ಮತ್ತೆ ಎಡವುತ್ತಿರುವುದೆಲ್ಲಿ? ಎರಡು ದಿನಗಳಿಂದ ಸಾಮಾಜಿಕ ತಾಣದಲ್ಲಿ NRC CAA ಗಿಂತ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ ವಕ್ಫ್ ಮಂಡಳಿಯ ಬಗ್ಗೆ. ಅದರಲ್ಲೂ ಶಾಫಿ ಸ-ಅದಿ ಯವರು ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಬಗೆಯಲ್ಲಿ ಪರ-ವಿರೋಧದ ವಾದಗಳು ಬಾನಿಗೇರಿದೆ. ಶಾಫಿ ಸ-ಅದಿಯವರು CAA ಬಗ್ಗೆ ಮೌನವಾಗಿದ್ದಾರೆ ಎನ್ನುವುದು ಒಂದು ವಾದ, ಅವರು ಇದನ್ನು ಈಗಲೂ ತಮ್ಮದೇ ದಾರಿಯ ಮೂಲಕ ವಿರೋಧಿಸುತ್ತಿದ್ದಾರೆ ಎನ್ನುವ ಮತ್ತೊಂದು ವಾದ... ಯಾಕೋ ತುಂಬಾ ಬೇಸರವಾಗುತ್ತಿದೆ. ಸಂವಿಧಾನ ವಿರೋಧಿ ಕಾನೂನೊಂದರ ವಿರುದ್ಧವಾಗಿ ಇಡೀ ದೇಶವೇ ಒಟ್ಟಾಗಿ ಸಮರ ಸಾರಿರುವಾಗ ನಾವು ಮಾತ್ರ ಇನ್ನೂ ತಮ್ಮದೇ ಪಕ್ಷ-ಸಂಘಟನೆಯ ಅಸ್ತಿತ್ವದ ತಯಾರಿಯಲ್ಲಿದ್ದೇವೆ ಎಂದಾದರೆ ಇದಕ್ಕಿಂತ ದೊಡ್ಡ ದುರಂತ ಬೇರೇನಿದೆ? ಗೊಂದಲಗಳು ಸಹಜ..! ಶಾಫಿ ಸ-ಅದಿಯವರು ಮಂಗಳೂರು ಗೋಲಿಬಾರ್ ಸಮಯದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದಾಗಲೇ ವಿರೋಧ ಎದ್ದು ಬಂದಿತ್ತು. ಮುಖ್ಯಮಂತ್ರಿ ಹೇಳಿದ್ದು "ಮುಸಲ್ಮಾನರು ಈ ಕುರಿತು ಆತಂಕ ಪಡುವುದು ಬೇಡ, ಯಾರಿಗೂ ಯಾವುದೇ ತೊಂದರೆಯಾಗುವುದಿಲ್ಲ" ಎಂದು. ಆದರೆ ಇದನ್ನೇ ಮೋದಿ ಮತ್ತು ಅಮಿತ್ ಷಾ ಹಿಂದಿನಿಂದಲೂ ಹೇಳಿಬರುತ್ತಿದ್ದಾರೆ. ಈ ಕಾಯ್ದೆಯನ್ನು ಜಾರಿ ಮಾಡಲು ಹರಸಾಹಸ ಪಡುತ್ತಿರುವ ಇವರಿಂದ ಈ ಮಾತನ್ನೇ ನಿರೀಕ್ಷಿಸಬೇಕಷ್ಟೇ. ಎಷ್ಟೇ ಚರ್ಚೆ- ವಾದ ಮಾಡಿದರೂ ಅವರಿಂದ ಅಷ್ಟು ಬೇಗನೇ ಬೇರೇನನ್ನೂ ನಿರೀಕ್ಷ...

ತಡೆಯುವುದಾದರೆ...

ಇಮೇಜ್
ಬರೆವ ಕೈಯನಷ್ಟೇ ಕಟ್ಟಬಹುದು ಎದೆಯಿಂದ ಬಿದ್ದ ಪದವನ್ನಲ್ಲ ನನ್ನ ಪೆನ್ನಿ ಗಿಂತ ಶಕ್ತವಾದ ಗನ್ನು ಕೂಡ ನಿನ್ನಲಿಲ್ಲ ನಾನೂ ಬರೆಯುತ್ತೇನೆ ಬಂಧಿಸುವವರಿಗೆ ತಾಕೀತಾಗಿ ಚೆಲ್ಲಿದ ಅಕ್ಷರಗಳೆಲ್ಲಾ ಜನರ ಮನಸೊಳಗೆ ಮೊಳಕೆಯಾಗುವಂತೆ ಸೂರ್ಯನಿಗೆಷ್ಟೇ ಪರದೆಯಿಟ್ಟರೂ ಕಿರಣ ಭೂಮಿ ಮುಟ್ಟದಿರಲ್ಲ ಕೋಣೆಯೊಳಗಿನ ಕವಿ ಮತ್ತೂ ತೀಕ್ಷ್ಣವಾಗುತ್ತಾನೆ ನೀನು, ಕವಿಯ ಧರ್ಮದಿಂದ ಅಳೆದರೆ  ನಾನು ಕವಿಧರ್ಮವನ್ನೇ ಮೆರೆಯುತ್ತೇನೆ ಪೆನ್ನು ಕಾಗದದಿಂದಲೇ ನವ ಕ್ರಾಂತಿಗೆ ಮುನ್ನುಡಿ ಬರೆಯುತ್ತೇನೆ ತಡೆಯಲಾಗುವುದಾದರೆ ತಡೆದು ನೋಡು ಚಿಮ್ಮುವ ಪದಗಳ ಮಾಲೆಯನು ಕೂಡಿ ಹಾಕಿದಷ್ಟು, ಲಾಠಿ ಬಿದ್ದಷ್ಟು ಶಕ್ತವಾಗುವ ಕವಿಯ ಕವಿತೆಯನು.. -ಹಕೀಂ ಪದಡ್ಕ

ಬದುಕಿನ ದರ್ದು..

ಇಮೇಜ್
ಸಾವು ಬೆನ್ನತ್ತಿ ಬಂದಾಗ ಬದುಕಲು ಓಡಿದವರು ನಾವು ಬದುಕಬೇಕಾದ ನಿನ್ನೆಗಳಲ್ಲಿ ಸತ್ತು ಮಲಗಿದ್ದೆವು ರೋಗ,ಪ್ರಳಯ, ಗಲಭೆಗಳೆಲ್ಲಾ ಸಾವಿಗೆ ಕಾರಣವಷ್ಟೇ ಮಿಟುಕಿಸುವ ಕಣ್ಣುಗಳೆಲ್ಲಾ ಕೊನೆಗೊಮ್ಮೆ ಮುಚ್ಚಿಕೊಳ್ಳುವುದುಂಟು ನನ್ನ ಮನೆ ಸುಟ್ಟುಕೊಳ್ಳುವ ತನಕ ಊರಿಗೆ ಬಿದ್ದ ಬೆಂಕಿಯೂ ತಮಾಷೆಯೇ ಮನುಷ್ಯ ಪಿಶಾಚಿಯಾದಾಗ ಕರುಣೆಗೂ ಸಿಟ್ಟು ಬಂದೀತು ದ್ವೇಷ ಉಕ್ಕುವ ಹೃದಯವಿರುವಾಗ ಅಹಮ್ಮಿಗೂ ಜಾಗ ಸಿಗುತ್ತದೆ ನಶೆಯ ಬದುಕಿಗೆ ಬರೆ ಎಳೆಯಲು ಸಾವೇ ಬರಬೇಕೆಂದಿಲ್ಲ ಜಗತ್ತೇ ರಂಗಮಂಟಪವಾಗಿರುವಾಗ ಮುಖವಾಡ ತೊಡುವುದರಲ್ಲಿ ತಪ್ಪೇನಿದೆ? ಬದುಕು ಸಾಯುವ ಮುನ್ನ ಒಂದಷ್ಟು ನೆಣ ಸುಡಬೇಕಿದೆ.. -ಹಕೀಂ ಪದಡ್ಕ

ಬೇಡಿಕೆ..

ಇಮೇಜ್
ಪ್ರಭೂ, ಈ ರಮಳಾನಿನಲ್ಲಿ ಎಂದಿಗಿಂತ ತುಸು ಹೆಚ್ಚೇ ಬೇಡಿಕೆಗಳಿವೆ ನಿನ್ನೆಡೆಗೆ ಚಾಚಿದ ಕೈಗಳಲಿ ಪಾಪದ ಕಳೆಗಳೇ ಅಂಟಿಕೊಂಡಿದೆ ಸಾವಿನ ಪರಿಮಳ ಹರಡಿದಾಗಲೇ ನಿನ್ನ ನೆನಪಾಗುತ್ತದೆ ಲೋಕದ ಭ್ರಮೆಯ ಬದುಕೇ ಲಹರಿಯಾಗಿದೆ ಓದು, ಅಂತ ನೀ ತೋರಿಕೊಟ್ಟ ಗ್ರಂಥವೂ ಅಟ್ಟದಲ್ಲಿರಿಸಿದ್ದೇನೆ ನನ್ನ ನಿನ್ನ ಅಂತರ ಎಷ್ಟಿತ್ತೆಂದರೆ ಮಸೀದಿ ದಾರಿಯೂ ನುಣುಪಾಗುವಷ್ಟು ಈಗ, ಮಸೀದಿಗಳು ಮುಚ್ಚುವಾಗ ಭ್ರಾಂತಿ ಶುರುವಾಗಿದೆ ಹೃದಯವನ್ನಾದರೂ ತೆರೆದುಕೊಡು ಅದನ್ನೇ ಮಸೀದಿಯಾಗಿಸುತ್ತೇನೆ ರಬ್ಬೀ, ಈ ರಮಳಾನಿನಲ್ಲಾದರೂ ಬದುಕಿನ ನಶೆಯ ಇಳಿಸಿಬಿಡು ಕಲುಷಿತ ಮನಸ್ಸನು ತೊಳೆದು ನಿನ್ನೆಡೆ ಮರಳುತ್ತೇನೆ.. -ಹಕೀಂ ಪದಡ್ಕ

ಪರಿಸರ ದಿನ

ಇಮೇಜ್
- ನಮ್ಮ ಪರಿಸರ ದಿನ.. ವಿಶ್ವ ಪರಿಸರ ದಿನದಂದು ಊರ ಗಣ್ಯರ ಉಪಸ್ಥಿತಿಯಲ್ಲಿ ಆ ಶಾಲೆಯ ವರಾಂಡದಲ್ಲಿ ಒಂದು ತೆಂಗಿನ ಗಿಡ ನೆಡಲಾಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಚರ್ಚಾಕೂಟಗಳೂ ನಡೆಯಿತು. ಗಿಡ ನೆಡುವ ಬಗ್ಗೆ ಮಕ್ಕಳಲ್ಲಿ ಜಾಗೃತಿ  ಮೂಡಿಸುತ್ತಿದ್ದರು. ಮುಂದಕ್ಕೆ ಪ್ರತಿ ವರ್ಷ ಪರಿಸರ ದಿನದಲ್ಲಿ ಗಿಡ ನೆಡುವುದಕ್ಕೆ ಹೊಸ ಗುಂಡಿ ತೋಡುವ ಅಗತ್ಯ ಬರಲಿಲ್ಲ.. ಈ ಬಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭನೆಯಿಂದ ಆಚರಿಸುವ ತೀರ್ಮಾನವಾಯಿತು. ಶಾಲಾ ಮೈದಾನದ ಸುತ್ತ ಬೆಳೆದು ನಿಂತಿದ್ದ ಒಂದಷ್ಟು ಗಿಡ-ಮರಗಳನ್ನು ಕಡಿದು ಮೈದಾನವನ್ನು ಇನ್ನಷ್ಟು ವಿಶಾಲಗೊಳಿಸಲಾಯಿತು.  ಮೈದಾನ ಕೂಡ ಪ್ರತಿ ವರ್ಷ ವಿಶಾಲವಾಗುತ್ತಲೇ ಇತ್ತು.. ಭಾಷಣಗಳಲ್ಲಿ ಗಿಡ ನೆಡುವ ಬಗ್ಗೆ ಹೇಳಿತ್ತೇ ವಿನಃ ಅದನ್ನು ಪೋಷಿಸುವುದು ಹೇಗೆ ಎಂದು ಹೆಚ್ಚಿನವರು ಹೇಳಿಕೊಟ್ಟಿರಲಿಲ್ಲ. -ಹಕೀಂ ಪದಡ್ಕ

ವಿಕೃತ..

ಇಮೇಜ್
ಬದಲಾದ ಜಗದ ನಿಯಮದೊಡನೆ ಬದುಕು ವಿಕೃತವಾಗಿದೆ ಮನುಷ್ಯರ ನಾಡಲ್ಲೀಗ ಕತ್ತಿ ತುಪಾಕಿಗಳದ್ದೇ ಸಮರ ಬೆಲೆಕಟ್ಟಲಾಗದ್ದೆಂಬ ಪ್ರೀತಿಯೂ ಇಲ್ಲಿ ಏಲಂ ಮಾಡಲಾಗುತಿದೆ ಕಾಂಚಣದ ಮುಂದೆ ಮನಸ್ಸು ನೃತ್ಯವಾಡುತಿದೆ ಅರಿಯದ ತಪ್ಪಿಗೆ ಕ್ಷಮೆಯಿಲ್ಲ ಅರಿತು ಮಾಡಿದವನಿಗೆ ಶಿಕ್ಷೆಯಿಲ್ಲ ಬದುಕಿಗೂ ಹಕ್ಕಿಲ್ಲ ಸಾವು ಸೋಲುವುದಿಲ್ಲ ಮನುಷ್ಯನೆಂಬುದು ಬರಿಯ ಮುಖವಾಡ ಮಾತ್ರ ಇದು ನೆತ್ತರ ಹೀರುವ  ರಾಕ್ಷಸರ ನಾಡು ಮನುಷ್ಯನಿಲ್ಲದ ಮನುಷ್ಯರ ನಾಡು..!? -ಹಕೀಂ ಪದಡ್ಕ

ನನಗೆ ನಗು ಬರುತ್ತಿದೆ..

ಇಮೇಜ್
ಚುಚ್ಚುವ ಹಸಿವಿಗೆ ಮದ್ದು ಹುಡುಕಿ ಅಲೆಯುವವನ ಮುಂದೆ ತಟ್ಟೆ, ಚಪ್ಪಾಳೆ ತಟ್ಟಿ ದೀಪ ಹಚ್ಚಲು ಹೇಳುವಾಗ ನನಗೆ ನಗು ಬರುತ್ತಿದೆ ರೋಗದ ಬೆಂಕಿಗೆ ಸುಟ್ಟು ಹೋದ ಜನರ ಮುಂದೆ ಆಕಾಶದಿಂದ ಹಣ ಸುರಿಸುವ ಮಾತನ್ನಾಡುವಾಗ ನನಗೆ ನಗು ಬರುತ್ತಿದೆ ಸೋಂಕು ತಡೆಯಲು ಮಾಸ್ಕ್ ಗ್ಲೌಸ್ ತೊಟ್ಟವರ ಮುಂದೆ ಖಾಯಿಲೆಗೂ ಗಡ್ಡ ಮೀಸೆ ಬಿಡಿಸಿ ಟೋಪಿ ಧರಿಸುವಾಗ ನನಗೆ ನಗು ಬರುತ್ತಿದೆ ಸೂತಕದ ಮನೆಯಲ್ಲಿ ಕಣ್ಣೀರಿಡುವ ಕತ್ತಲೆಯ ಮುಂದೆ ಶೋಕಿಯ ಅಳುವಿನೊಂದಿಗೆ ಮೌನದಿ ಬೆಳಕ ನುಂಗುವಾಗ ನನಗೆ ನಗು ಬರುತ್ತಿದೆ  ಪ್ರಭುವಿನ ಮಾತು ಪಾಲಿಸದವರ ಮುಂದೆ ಚಾಕು ಹಿಡಿದ ಅನುಯಾಯಿಗಳ ರಾಜಭಕ್ತಿ ಕಂಡಾಗ ನನಗೆ ನಗುವೇ ಬರುತ್ತಿದೆ.. -ಹಕೀಂ ಪದಡ್ಕ

ಬರಡು ಬದುಕು

ಇಮೇಜ್
ಕೋಣೆಯೊಳಗಿನ ಒಂಟಿತನ ಗೋಡೆಯೊಂದಿಗೆ ಮಾತಿಗಿಳಿದಿದೆ ಬದುಕಿನ ರಂಪಾಟಕ್ಕೆ ಲಗಾಮು ಹಿಡಿಯಲಾಗಿದೆ ವೈರಾಣುವೊಂದಕೆ ಹೆದರಿ ಜನ ಕಿಟಕಿ ಮುಚ್ಚಿಕೊಂಡಿದ್ದಾರೆ ನಗರದ ಅಂಗಡಿ ಬಾಗಿಲಲಿ ಜೇಡನು ಬಲೆ ನೇಯುತಿದ್ದಾನೆ ಗದ್ದಲದ ಹೆದ್ದಾರಿಗೂ ಬೀಗ ಜಡಿಯಲಾಗಿದೆ ಮೌನ ತುಂಬಿದ ಟಾರನ್ನು ಬಿಸಿಲು ಅಪ್ಪಿಕೊಂಡಿದೆ ತೊಟ್ಟಿಯಿಂದ ಹೆಕ್ಕಿ ತಿನ್ನುವ ಹಸಿವಿಗೂ ಹಸಿವಾಗಿದೆ ಹೊಟ್ಟೆಯೊಳಗೂ ಈಗ ಲಾಠಿ ಬೂಟುಗಳ ಸದ್ದು ನಿನ್ನೆಗಳ ಜೀವನ ಬರೀ ನೆನಪಲ್ಲೇ ಉಳಿದಿದೆ ಇವತ್ತೇನಿದ್ದರೂ  ಬದುಕು ಬಂಧೀಖಾನೆ..! - ಹಕೀಂ ಪದಡ್ಕ

ಅವಳು ಧ್ವನಿಯೆತ್ತಿದ್ದು ದೇಶಕ್ಕಾಗಿ..

ಇಮೇಜ್
ಜಾಮಿಆ ಮಿಲ್ಲಿಯಾ ಸಂಶೋಧನಾ ವಿದ್ಯಾರ್ಥಿ ಸಫೂರಾ ಸರ್ಗರ್ ತಿಹಾರ್ ಜೈಲಿನ ಕತ್ತಲೆ ಕೋಣೆಯಲ್ಲಿ ಕಾಲಕಳೆಯುತ್ತಿದ್ದಾಳೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಫೂರಾಳನ್ನು ಯುಎಪಿಎ ಎಂಬ ಕರಾಳ ಕಾನೂನನ್ನು ಹೊರಿಸಿ ಜೈಲಿನಲ್ಲೇ ಕಳೆಯುವಂತೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಜಾಮೀನು ಕೋರಿ ಸಲ್ಲಿಸಿದ ಮೂರನೇ ಅರ್ಜಿಯೂ ತಿರಸ್ಕೃತಗೊಂಡಿದ್ದು 'ಜಾಮೀನಿಗೆ ಅರ್ಹಳಲ್ಲ' ಎಂದು ನ್ಯಾಯಾಧೀಶರಾದ ಧರ್ಮೇಂದರ್ ರಾಣಾ ಆದೇಶ ಹೊರಡಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಾದ್ಯಂತ ದೇಶಪ್ರೇಮಿ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಅದರ ಭಾಗವಾಗಿ ದೆಹಲಿಯಲ್ಲೂ ಬೃಹತ್ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು ನಡೆಸಿದ ಸಮರದಲ್ಲಿ ಸಫೂರಾ ನೇತೃತ್ವ ನೀಡಿದ್ದಳು. ಇದೇ ಕಾರಣಕ್ಕಾಗಿಯೇ ಅವಳನ್ನು ಬಂಧಿಸಿ ಮೊದಲು ಭಾರತೀಯ ಕಾನೂನು ಪ್ರಕಾರ ಆರೋಪ ಹೊರಿಸಿದ್ದ ದಿಲ್ಲಿ ಪೋಲೀಸರು ಆ ಬಳಿಕ ಭಯೋತ್ಪಾದನೆ ವಿರುದ್ಧ ಕಾನೂನು ಯುಎಪಿಎ ಹೊರಿಸಿದ್ದಾರೆ. ಪೆಬ್ರವರಿ 23 ರಂದು ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು ಮತ್ತು ಅದು ಮುಂದೆ ನಡೆದ ದೆಹಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂಬುವುದಾಗಿದೆ ದೆಹಲಿ ಪೋಲೀಸರ ವಾದ. ಸುಳ್ಳು ಆರೋಪ ಹೊರಿಸಿ ಗರ್ಭಿಣಿ ಸ್ತ್ರೀಯೊಬ್ಬಳನ್ನು ಏಕಾಂತ ಜೈಲಲ್ಲಿರಿಸಿ ಹಿಂಸಿಸಲಾಗುತ್ತಿದೆ. ಯಾವುದೇ ಪುರಾವೆಯಿಲ್ಲದೆ ನಕಲಿ ಕೇಸುಗಳನ್ನು ಜಡಿದು...

ಸಾವಿನ ಬದುಕು

ಇಮೇಜ್
ಬರಡು ಬದುಕಲಿ ಫಸಲಿನ ಕನಸು ಕಂಡ ನಾನದೆಂತ ಮೂರ್ಖ..! ಬಿತ್ತಿದ  ಬೀಜಗಳೊಂದೂ ಮೊಳಕೆಯೊಡೆಯಲಿಲ್ಲ ಮುಖವಾಡವಿಟ್ಟದು ಯಾಕಂದಿರಾ..? ನಗುವಿನ ಬಿಕ್ಕಳಿಕೆ ಕಾಣಿಸದಿರಲಷ್ಟೇ ಇಲ್ಲಿ ಸತಾಯಿಸುವ ಸೋಲು ಮಾತ್ರ ಆಗಾಗ ಗೆದ್ದು ಬರುತಿತ್ತು ಅಳುವ ಹೃದಯದ ಭಾರ ಮನಸ್ಸಿಗೂ ಹೊರೆ ನೋವಿನ ಒರತೆಯ ರಭಸಕೆ ಸತ್ತೇ ಬಿಡೋಣನ್ನುವಷ್ಟು  ನಾನೆಟ್ಟ ಗಿಡದ ಹೂ ಕೀಳಲು ಸಾಲುಗಟ್ಟಿ ನಿಂತ ಜನ ನೋವನ್ನೂ ಕಿತ್ತೊಯ್ಯಿರೆಂದು ಬೊಬ್ಬಿಟ್ಟರೂ ಕಿವಿಗಿಳಿಸಲಿಲ್ಲ ಉಸಿರಿನ ಬಿಸಿ ಗಾಳಿಗೆ ಎದೆಯೊಳಗಿನ ಅಳು ಕೇಳಿಸದು ಬದುಕಿಗೊಂದು ಅರ್ಥ ಕೊಡಲು ಸಾವೇ ಬರಬೇಕಾದೀತು.. - ಹಕೀಂ ಪದಡ್ಕ, (Cochin)

ಇಲ್ಲಿ ನಮಗೂ ಉಸಿರುಗಟ್ಟುತ್ತಿದೆ..

ಇಮೇಜ್
I can't breath - ಈ ಒಂದು ಪದ ಬಹಳ ಸುದ್ದಿಯಾಗಿದೆ. ಅಮೆರಿಕಾದಲ್ಲಿ ಕಪ್ಪು ಜನಾಂಗಕ್ಕೆ ಸೇರಿದ್ದ ಜಾರ್ಜ್ ಫ್ಲಾಯ್ಡ್‌ ಎಂಬ ವ್ಯಕ್ತಿಯನ್ನು ಪೋಲೀಸರು ಅಮಾನವೀಯವಾಗಿ ಹತ್ಯೆಗೈದ ವಿಚಾರವಾಗಿ ಪ್ರತಿಭಟನೆಗಳು ಮುಗಿಲೆತ್ತರಕ್ಕೆ ಸದ್ದು ಮಾಡಿತ್ತು. BLACK LIVES MATTER ಎಂಬ ಘೋಷಣೆಯೊಂದಿಗೆ ಅಮೆರಿಕಾ ಜನತೆ ಮಾತ್ರವಲ್ಲದೇ ಇತರ ರಾಷ್ಟ್ರಗಳೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಧ್ವನಿಗೂಡಿಸಿದ್ದರು. ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ಬೆಳೆದು ಅಮೆರಿಕ ಅಧ್ಯಕ್ಷ ಟ್ರಂಪ್ ನಿವಾಸವಾದ ಶ್ವೇತ ಭವನಕ್ಕೂ ಪ್ರತಿಭಟನಾಕಾರರು ಮುಗಿಬೀಳುವ ಹಂತಕ್ಕೆ ತಲುಪಿತ್ತು.  ಜಾರ್ಜ್ ಫ್ಲಾಯ್ಡ್‌ ಎಂಬ 46 ವರ್ಷದ ಕಪ್ಪು ಜನಾಂಗದ ವ್ಯಕ್ತಿಯನ್ನು ಮೇ 25 ರಂದು ಅಮೆರಿಕಾದಲ್ಲಿ ಪೋಲೀಸರ ಕ್ರೂರ ಕೃತ್ಯದಿಂದ ಬಲಿಯಾಗಿದ್ದು ಇಷ್ಟೊಂದು ವ್ಯಾಪಕವಾಗಿ ಸುದ್ದಿಯಾಗಿದೆಯಾದರೂ, ಅಮೆರಿಕಾದಲ್ಲಿ ಕರಿಯರ-ಬಿಳಿಯರ ನಡುವಿನ ಈ ಕೋಲಾಹಲ ಹಿಂದಿನಿಂದಲೂ ಮುಂದುವರಿಯುತ್ತಿದೆ. ಜಾರ್ಜ್ ಪ್ರಕರಣವನ್ನು ಎತ್ತಿ ಹಿಡಿದು ನಮ್ಮಲ್ಲೂ ಕೂಡ ಪ್ರತಿರೋಧ ಕಂಡುಬಂದಿದೆ. ಸಾಮಾಜಿಕ ತಾಣಗಳು, ಪತ್ರಿಕೆಗಳಲ್ಲಿ ಈ ಕುರಿತು ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಮೂಲಕ ಈ ಕ್ರೂರ ಕೃತ್ಯದ ವಿರುದ್ಧ ಶಬ್ಧ ಸೇರಿಕೊಂಡಿದೆ. #blaklivesmatter ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟ್ಟರ್ ಸೇರಿದಂತೆ ಇತರ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಬರಹಗಳು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈ ಒಂದು ಆಂದೋ...