ಪೋಸ್ಟ್‌ಗಳು

ಪ್ರಧಾನಿಗೆ ಗೌರವ ಕೊಡಿ..

ಇಮೇಜ್
ಭಾ ರತದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಸ್ವಸ್ಥತಗೊಂಡ ಜನಜೀವನದ ಮಧ್ಯೆ ತಳ್ಳುಗಾಡಿಯಂತೆ ಮೆಲ್ಲಮೆಲ್ಲಗೆ ಮುಂದಕ್ಕೋ ಹಿಂದಕ್ಕೋ ಎಂದು ತಿಳಿಯದ ರೀತಿಯಲ್ಲಿ ಸಾಗುವ ಬದುಕಿನ ಬಂಡಿಯಲ್ಲಿ ಇವತ್ತು ಎಲ್ಲರೂ ನಿಸ್ಸಹಾಯಕರಾಗಿದ್ದಾರೆ. ಜನವಿರೋಧಿ ನೀತಿಗಳ ಮೂಲಕ ಮೊದಲೇ ಶವದಂತಾಗಿರುವ ಜನರನ್ನು ಮತ್ತೆಮತ್ತೆ ಚುಚ್ಚುವ ಸರಕಾರದ ಕ್ರೂರ ನಡೆಯು ದೇಶದವನ್ನು ಇನ್ನಷ್ಟೂ ಪಾತಾಳಕ್ಕೆ ತಳ್ಳಿದೆ ಮಾತ್ರವಲ್ಲ, ಅದೆಷ್ಟೋ ಸಾವು ನೋವುಗಳಿಗೆ ದೇಶದ ಪವಿತ್ರ ಮಣ್ಣು ಸಾಕ್ಷಿಯಾಗಿದೆ.  ಸೆಪ್ಟೆಂಬರ್ 17 ರಂದು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ಸಾಮಾಜಿಕ ತಾಣಗಳಲ್ಲಿ ದೇಶದ ಯುವಕರು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದು ಆಚರಿಸಿಕೊಂಡಿದ್ದರು. #NationalUnemploymentDay ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಾದ್ಯಂತ ಸಂಚಲನವನ್ನೇ ಸೃಷ್ಟಿಸಿ, ಸರಕಾರದ ವೈಫಲ್ಯತೆಯನ್ನು, ಪ್ರಧಾನಿಯ ಸರ್ವಾಧಿಕಾರಿ ಮುಖವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಯಲಾಯಿತು. ಆ ಸಂಧರ್ಭದಲ್ಲಿ ಒಂದು ಗುಂಪು 'ಪ್ರಧಾನಿಯನ್ನು ಗೌರವಿಸಿ' ಎಂದು ಅಂಗಲಾಚುವ ಪರಿಸ್ಥಿತಿಯಂತೂ ತಮಾಷೆಯಾಗಿತ್ತು. ವಾಸ್ತವದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದಂತಹ ಡಾ‌. ಮನಮೋಹನ್ ಸಿಂಗ್ ಸೇರಿದಂತೆ ಬಿಜೆಪಿಯೇತರ ಹೆಚ್ಚಿನ ಪ್ರಧಾನಿಗಳನ್ನು ಹಾಗೂ ಇತರೆ ರಾಜಕೀಯ ನಾಯಕರನ್ನು, ಧಾರ್ಮಿಕ ಮುಖಂಡರನ್ನೆಲ್ಲಾ ಹೀನವಾಗಿ ಚಿತ್ರ...

ಪಟ್ಟಣದೆಡೆಗಿನ ದಾರಿ ಮಧ್ಯೆ..!

ಇಮೇಜ್
ಸ ಣ್ಣದೊಂದು ಗ್ರಾಮದಲ್ಲಿ ಹುಟ್ಟಿಬೆಳೆದವರಿಗೆ ಪಟ್ಟಣದ ಮೇಲಿನ ಕನಸು ಸಹಜವಾಗಿಯೇ ಇರುತ್ತದೆ. ಗಗನಚುಂಬಿ ಕಟ್ಟಡಗಳು, ರಸ್ತೆಪೂರಾ ವಾಹನಗಳ ಸಾಲು, ವಿಧವಿಧದ ಮಳಿಗೆಗಳು, ಟಾರು ಹೊದಿಸಿದ ವಿಶಾಲ ರಸ್ತೆ, ಸುತ್ತಲುಇ ಜನಜಂಗುಳಿ.. ಹೀಗೆ ಹಳ್ಳಿ ಹುಡುಗ ಸಸಿ ಮರಗಳು ಮತ್ತು ಪ್ರಾಣಿ ಪಕ್ಷಿಗಳೊಂದಿಗಿನ ಬದುಕಿನಿಂದ ಪಟ್ಟಣದ ಕಡೆಗಿರುವ ದಾರಿ ನೋಡುತ್ತಾ ಮನದೊಳಗೇ ಕಾಲ್ಪನಿಕ ನಗರವನ್ನು ಕಟ್ಟಿರುತ್ತಾನೆ. ಸಂಜೆಯಾಗುತ್ತಲೇ  ಸುತ್ತಲೂ ಕತ್ತಲು ತುಂಬಿದ ಹಳ್ಳಿಯ ಕವಲುದಾರಿಗಿಂತ ಬಣ್ಣ ಬಣ್ಣದ ಲೈಟುಗಳಿಂದ ಮಿನುಗಿ ಕಂಗೊಳಿಸುವ ಹೆದ್ದಾರಿಯನ್ನೇ ಮೆಚ್ಚಿಕೊಳ್ಳುತ್ತೇವೆ. ಹೀಗೇ ಹಳ್ಳಿ ಮತ್ತು ಪಟ್ಟಣದ ನಡುವಿನ ದೂರವೇ ಬದುಕು. ಆಸೆಯಿಲ್ಲದೆ ಬದುಕಿ ಸಿದ್ಧಾರ್ಥ ಬುದ್ಧನಾದಂತೆ ಇಲ್ಲಿ ಎಲ್ಲರೂ ಆಸೆಯನ್ನು ತ್ಯಜಿಸಿಲ್ಲ. ಬುದ್ಧನ ಹಾದಿಗೆ ಕೆಲವೇ ಕೆಲವು ಮಂದಿ ಸಾಗಿದರಲ್ಲದೇ ಉಳಿದವರೆಲ್ಲರೂ ಆಸೆಯ ಮಡುವಿನಲ್ಲಿ ತೇಲಾಡುತ್ತಿದ್ದಾರೆ. ಸಾವಿನ ಕ್ಷಣ ಮೊದಲೂ ಬದುಕನ್ನೇ ಬಯಸುವ ನಮ್ಮ ಆಸೆಯ ಅಗಾಧ ಪ್ರಮಾಣ ಬದುಕಿನುದ್ದಕ್ಕೂ ಮುಂದುವರಿದಿರುತ್ತದೆ. ಹಳ್ಳಿಯವನು ಪಟ್ಟಣದ ಕನಸು ಕಾಣುವಂತೆ, ಪಟ್ಟಣದಲ್ಲೇ ಹುಟ್ಟಿಬೆಳೆದವ ಹಳ್ಳಿಯ ಮೇಲೆ ಪುಳಕಿತನಾಗುವುದೂ ಉಂಟು. ಅಂದರೆ ಮನುಷ್ಯ ತನ್ನಲ್ಲಿಲ್ಲದ್ದನ್ನೇ ಪಡೆಯುವ ಆಕಾಂಕ್ಷೆಯಲ್ಲಿರುತ್ತಾನೆಂದರ್ಥ.  ಹಳ್ಳಿಹುಡುಗನೊಬ್ಬ ಬಾಲ್ಯದಲ್ಲಿ ಮನಸ್ಸಿನೊಳಗೇ ಕಟ್ಟಿಕೊಂಡ ನಗರದರಮನೆಯನ್ನು ಮುಂದಕ್ಕೆ ಕಣ್ತುಂಬ...

ಕನ್ನಡವೇ ಸತ್ಯ; ಕನ್ನಡವೇ ನಿತ್ಯ..

ಇಮೇಜ್
ಕ ರ್ನಾಟಕ ರಾಜ್ಯದಲ್ಲಿ ಈಗ ಅತಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿಚಾರವೆಂದರೆ, 'ಹಿಂದಿ ದಿವಸ್ ಮತ್ತು ಹಿಂದಿ ಹೇರಿಕೆ' ಯ ಕುರಿತಾಗಿ. ಸರಕಾರವು ಸೆಪ್ಟೆಂಬರ್ 14 ನ್ನು ಹಿಂದಿ ದಿವಸ್ ಆಗಿ ಆಚರಿಸುವಂತೆ ಪ್ರಖ್ಯಾಪಿಸಿದಂದಿನಿಂದ ಈ ಚರ್ಚೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿದೆ‌. ಕರ್ನಾಟಕದಲ್ಲಿದ್ದುಕೊಂಡ ಕನ್ನಡವನ್ನೇ ಉಸಿರಾಡುವ ಕನ್ನಡಿಗರು ಹಿಂದಿ ದಿನ ಎಂಬುದನ್ನು ಆಚರಿಸಬೇಕಿಲ್ಲ ಮತ್ತು ಆಚರಿಸುವುದೂ ಇಲ್ಲ ಎನ್ನುವುದೇ ಬಹುಪಾಲು ಕನ್ನಡಿಗರ ವಾದ. ಆದಾಗ್ಯೂ ಈ ವಾದ ಸಮಕಾಲೀನವೇ. ಕನ್ನಡಿಗರ ಮೇಲೆ ರಾಷ್ಟ್ರ ಭಾಷೆ ಎನ್ನುವ ನೆಪವೊಡ್ಡಿ ಹಿಂದಿಯನ್ನಿ ಬಲವಂತವಾಗಿ ಹೇರುವುದಕ್ಕಿರುವ ತಂತ್ರಗಳ ಮುಂದುವರಿದ ಭಾಗವಾಗಿದೆ ಇದು. ಇದನ್ನು ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸುತ್ತಿದ್ದಾರೆನ್ನುವುದು ಅಭುನಂದನಾರ್ಹ. ಕುವೆಂಪುರವರು ಒಂದು ಮಾತನ್ನು ಹೇಳುತ್ತಾರೆ; “ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಇರುವಂತೆ, ಫ್ರಾನ್ಸಿನಲ್ಲಿ ಫ್ರೆಂಚ್ ಇರುವಂತೆ, ಕರ್ನಾಟಕದಲ್ಲಿ ಕನ್ನಡವಿರಬೇಕು. ಈ ವಿಷಯದಲ್ಲಿ ಅಸ್ವಾಭಾವಿಕತೆ ಲವಲೇಶವೂ ಇಲ್ಲ. ” ಸಾಮಾನ್ಯವಾಗಿ ಕನ್ನಡ ಭಾಷೆಯಂತೆಯೇ ಹಿಂದಿಯೂ ಒಂದು ಭಾಷೆ. ಅದಕ್ಕೆ ಮಿಗಿಲಾದ ಪ್ರತ್ಯೇಕತೆಗಳೇನೂ ಇಲ್ಲ. ಉತ್ತರ ಭಾರತದಲ್ಲಿ ಹೆಚ್ಚಾಗಿ ಹಿಂದಿ ಬಳಕೆಯಾಗುತ್ತಿದೆ ಎಂದ ಮಾತ್ರಕ್ಕೆ ಹಿಂದಿಯನ್ನು ಎಲ್ಲರೂ ಪರಿಗಣಿಸಬೇಕೆನ್ನುವುದು ತಪ್ಪು. ಕನ್ನಡಿಗರಿಗೆ ಅಥವಾ ಕರ್ನಾಟಕಕ್ಕೆ ಕನ್ನಡವೇ ...

ಗಾಂಧಿಯ ರಾಮರಾಜ್ಯ ಮತ್ತು ಪ್ರಸ್ತುತ ಭಾರತ..!?

ಇಮೇಜ್
(ಈ ಲೇಖನ 'ಉದಯಕಾಲ' ದೈನಿಕದ 02 ನೇ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.) ಸತ್ಯ, ಅಹಿಂಸೆ ಮತ್ತು ಸಮಾನತೆಯ ಪ್ರತಿಪಾದನೆಯೊಂದಿಗೆ ಭಾರತವನ್ನು ಬ್ರಿಟಿಷರ ಕರಾಳ ಕೈಗಳಿಂದ ಬಿಡಿಸಿಕೊಂಡು, ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯದ ಸವಿರುಚಿ ಉಣಿಸುವಲ್ಲಿ ಮಹಾತ್ಮಾ ಗಾಂಧಿಯ ಪರಿಶ್ರಮ ಅವಿಸ್ಮರಣೀಯ. ಇಂದಿಗೂ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಮನಸ್ಸಿನಾಳದಲ್ಲಿ ಮರೆಯದೇ ಅಚ್ಚಾಗಿ ಮೂಡಿರುವ, ಪ್ರತಿಕ್ಷಣವೂ ಕಾಡುವುದು ಬಾಪೂಜಿಯ ಅಹಿಂಸಾ ಮಾರ್ಗ, ಸತ್ಯ ಮತ್ತು ಸಮಾನತೆಯ ಬದುಕು, ಸರಳ ಜೀವನ, ಇವೆಲ್ಲದರ ಹೊರತಾಗಿ ಗಾಂಧಿ ಕಂಡ ಸುಂದರ, ಸ್ವಸ್ಥ ಭಾರತದ ಪರಿಕಲ್ಪನೆ. ಗಾಂಧಿ ಕನಸಿನ ಭಾರತದಲ್ಲಿ ಪ್ರಜೆ ಮತ್ತು ಪ್ರಭುವಿಗೆ ಸಮಾನ ಸ್ಥಾನವಿತ್ತು. ಅಸ್ಪೃಶ್ಯತೆ ಸಂಪೂರ್ಣವಾಗಿ ತೊಲಗಿತ್ತು. ತನ್ನ ಧರ್ಮದ ನಿಲುವಿನಲ್ಲಿ ಬದುಕುವುದರೊಡನೆ ಇತರ ಜಾತಿ-ಧರ್ಮಗಳನ್ನು ಗೌರವಿಸುವ, ಪ್ರೀತಿಸುವ ಮನಸ್ಥಿತಿ ಬೆಳೆದುಕೊಂಡಿತ್ತು. 'ಹಳ್ಳಿಗಳೇ ದೇಶದ ಆಧಾರ ಸ್ತಂಭ' ಎನ್ನುವ ಪರಿಕಲ್ಪನೆಯಡಿ ಭಾರತದಲ್ಲಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಿ, ಕೃಷಿ ಮತ್ತು ಕೈಗಾರಿಕೆಗಳಿಗೆ ಪ್ರಾಶಸ್ತ್ಯ ಕೊಡುವುದರೊಂದಿಗೆ ದೇಶದ ಬೆಳವಣಿಗೆಗೆ ದಾರಿಯಿತ್ತು. ಸಾಕ್ಷರ ಭಾರತದ ದೂರದೃಷ್ಟಿಯಿತ್ತು. ದೇಶವೆಂಬ ನಮ್ಮ ಅರಮನೆಯನ್ನು ಸದಾ ಸ್ವಚ್ಛವಾಗಿಡುವ ನಿಯ್ಯತ್ತಿತ್ತು. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಾಣುವುದಕ್ಕಾಗಿ 'ಗ್ರಾಮ ರಾಜ್ಯ' ದ ಆರ್ಥಿಕ...

ರೈತರು ಬೀದಿಯಲ್ಲಿದ್ದಾರೆ..

ಇಮೇಜ್
ನೋ ಟ್ ಬ್ಯಾನ್ ದೇಶದ ಬಡವರನ್ನು ಬೀದಿಪಾಲು ಮಾಡಿತು. ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ಬೀದಿಗಿಳಿದರು. ಎನ್ನಾರ್ಸಿ, ಸಿಎಎ ಹೆಸರಿನಲ್ಲಿ ದೇಶದ ಅಲ್ಪಸಂಖ್ಯಾತರನ್ನು ಬೀದಿಗಿಳಿಸಲಾಯ್ತು. ಬಿಎಸ್‌ಎನ್‌ಎಲ್ ಸಿಬ್ಬಂದಿಗಳೂ ಬೀದಿಗೆ ಬಂದಿದ್ದಾರೆ. ಕೊರೋನಾ ಎಂಬ ಮಹಾಮಾರಿ ಜನತೆಯನ್ನು ಮನೆಯೊಳಗೆ ಕೂರುವಂತೆ ಮಾಡಿದರ ಮಧ್ಯೆಯೇ, ಸರಕಾರ ಮತ್ತೊಮ್ಮೆ ಜನರನ್ನು ಬೀದಿಗಿಳಿಸುತ್ತಿದೆ. ಕೃಷಿ ಮಸೂದೆ ಎಂಬ ಕರಾಳ ನೀತಿಯಿಂದಾಗಿ ಮೊದಲೇ ಸಮಸ್ಯೆಗಳ ಸುಳಿಯಲ್ಲಿ ತಡಕಾಡುವ ರೈತರನ್ನು ಇನ್ನಷ್ಟು ತೊಂದರೆಗೀಡಾಗಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸಿ ದೇಶದಾದ್ಯಂತ ರೈತರು ಬೀದಿಯಲ್ಲಿದ್ದಾರೆ. ದುರಹಂಕಾರದ ಆಡಳಿತದಲ್ಲಿ ದೇಶವನ್ನು ಸರ್ವನಾಶ ಮಾಡುತ್ತಾ, ದೇಶದ ಪ್ರಜೆಗಳನ್ನು ಸದಾ ಪೀಡಿಸುತ್ತಾ, ಶ್ರೀಮಂತ ಕಾರ್ಪೊರೇಟರ್ ಗಳು, ಸೆಲೆಬ್ರೆಟಿಗಳನ್ನು ಮಾತ್ರ ತನ್ನ ಮಡಿಲಲ್ಲಿ ಜೋಪಾನ ಕಾಪಾಡಿಕೊಂಡು ಬಿಜೆಪಿ ಸರಕಾರ ಇಷ್ಟರ ತನಕ ಮುಂದುವರಿದಿದೆ. ಪ್ರಜೆಗಳೆಲ್ಲಾ ದಿನನಿತ್ಯ ಒಂದಲ್ಲ ಒಂದು ವಿಚಾರದಲ್ಲಿ ಸರಕಾರ ವಿರುದ್ಧ ಧ್ವನಿಯೆತ್ತುತ್ತಾ, ಹೋರಾಟ ನಡೆಸುತ್ತಲೇ ಇದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸದ ಸರಕಾರ ಮಾತ್ರ ದರಿದ್ರ ಆಡಳಿತದೊಂದಿಗೆ ದೇಶದವನ್ನು ಸಂಕಷ್ಟದ ಮೇಲೆ ಸಂಕಷ್ಟಕ್ಕೆ ದೂಡುತ್ತಿದೆ. ಮೇಲ್ನೋಟಕ್ಕೆ ಕೃಷಿ ಮಸೂದೆಯಲ್ಲಿ ರೈತರಿಗೆ ತೊಂದರೆಯಾಗುವಂತೆ ಕಂಡು ಬರುತ್ತಿಲ್ಲವಾದರೂ ಕೂಡ, ಈ ಮೂರು ಮಸೂದೆಗಳ ಬಗ್ಗೆ ಕೂಲಂಕುಷ...

ಹೇಗೆ ಕೊಲ್ಲುವುದಕ್ಕಾಗುತ್ತದೆ..?

ಇಮೇಜ್
ಅಟ್ಟಹಾಸ ಚೀರಾಟವೆಲ್ಲಾ ಕೆಲವೇ ದಿವಸವಿರಬಹುದು ಇನ್ನೊಂದು ಬ್ರೇಕಿಂಗ್ ನ್ಯೂಸ್ ಸಿಗುವ ತನಕ ಚಾನಲ್‌ನವನ ಪ್ರಧಾನ ವಾರ್ತೆಯಾಗಿರುವುದು ತನಿಖೆ ಪೂರ್ತಿಯಾಗುವ ತನಕ ಪೋಲೀಸರೂ ಓಡಾಡುತ್ತಿರಬಹುದು ದುಃಖ- ನಷ್ಟಗಳೆಲ್ಲಾ ಹೊತ್ತು ಹೆತ್ತ ತಾಯಿಗೆ ಮತ್ತು ಲಾಲಿಸಿ ಬೆಳೆಸಿದ ತಂದೆಗೆ ಮಾತ್ರ ಮತ್ತೆ ನೆನಪುಗಳು ಕೆಲವೊಮ್ಮೆ ಬಸ್ ನಿಲ್ದಾಣದಲ್ಲೋ ಹುತಾತ್ಮ ಸಭಾಂಗಣದಲ್ಲೋ ಸೀಮಿತವಾಗಿರಬಹುದು ಆಗಲೂ, ಬದಕಿನ ಆಸೆ ಮುಗಿಯದ ಮಡದಿ ನಾಲ್ಕು ಗೋಡೆಯೊಳಗೆ ಬಿಕ್ಕಳಿಸಿ ಅಳುತ್ತಿರಬಹುದು ರೆಕ್ಕೆಬಳಿಯದ ಮುಗ್ಧ ಮುಖ ಒಮ್ಮೆಯೂ ಮರಳದ ತಂದೆಗಾಗಿ ದಾರಿ ಕಾಯುತ್ತಿರಬಹುದು ಕೊಲೆಗಾರರು ಆ ಹೊತ್ತಲ್ಲಿ ಮುಂದಿನ ಬೇಟೆ ಹುಡುಕಿ  ಅಲೆಯುತ್ತಿರಬಹುದು. *** ಮೂಲ ಮಲಯಾಳಂ; ಎಬಿ ಕುಟ್ಟಿಯಾನಂ ಕನ್ನಡ; ಹಕೀಂ ಪದಡ್ಕ

ಮಾನವ ಧರ್ಮ (ಕವನ ವಾಚನ) | ಹಕೀಂ ಪದಡ್ಕ

ಇಮೇಜ್
 

ಕೇಸರಿ ಮತ್ತು ಹಸಿರು (ಕವನ ವಾಚನ) | ಹಕೀಂ ಪದಡ್ಕ

ಇಮೇಜ್
 

ಬದುಕಿನ ಕ್ಷಾಮ (ಕವನ) | ಹಕೀಂ ಪದಡ್ಕ

ಇಮೇಜ್
 

ಮೌನ ನಗರಿ (ಕವನ) | ಹಕೀಂ ಪದಡ್ಕ

ಇಮೇಜ್
 

ನನಗೆ ನಗು ಬರುತ್ತಿದೆ (ಕವನ) | ಹಕೀಂ ಪದಡ್ಕ

ಇಮೇಜ್
 

ಸ್ನೇಹ ಮತ್ತು ಯುದ್ಧ (ಕವಿತೆ) | ಹಕೀಂ ಪದಡ್ಕ

ಇಮೇಜ್
 

ಮೊಗ್ಗಲ್ಲೇ ಚಿವುಟಿದಾಗ (ಸಣ್ಣ ಕಥೆ) | ಸಫ್ವಾನ್ ಕೂರತ್

ಇಮೇಜ್
 

ಸುಳ್ಳು; ಸತ್ಯದ ಮೇಲೆ ಲೇಪಿಸಿದ ಪದರ..

ಇಮೇಜ್
ಇ ತ್ತೀಚೆಗೆ 600 ರಷ್ಟು ಡ್ರೋನ್ ತಯಾರಿಸಿದ್ದೇನೆ ಅನ್ನುತ್ತಾ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರತಾಪ್ ಎಂಬ ಹುಡುಗ ಮತ್ತೆ ಚರ್ಚೆಯಾಗುತ್ತಿದ್ದಾನೆ. ಡ್ರೋನ್ ಕಥೆಗಳೆಲ್ಲಾ ಸುಳ್ಳು, ಜನರನ್ನು ಸುಳ್ಳು ದಾಖಲೆ ತೋರಿಸಿ ಯಾಮಾರಿಸಿದ್ದಾನೆ, ಯಾವುದೋ ಪ್ರದರ್ಶನಕ್ಕಿಟ್ಟ ಡ್ರೋನ್ ಗಳ ಪಕ್ಕ ಪೋಟೋ ತೆಗೆಸಿ ಅದನ್ನು ತಾನೇ ನಿರ್ಮಿಸಿದ್ದು ಅನ್ನುತ್ತಾ ಸ್ವಯಂ ವಿಜ್ಞಾನಿಯಾಗಿದ್ದಾನೆಂದು ಹೇಳಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಾದ್ಯಂತ ಟೀಕೆ, ವಿಮರ್ಶೆ, ವ್ಯಂಗ್ಯಕ್ಕೊಳಗಾಗಿ ಚರ್ಚೆಗಳು ವ್ಯಾಪಿಸಿಕೊಂಡಿದೆ. ಅದರಾಚೆಗಿನ ಸತ್ಯ ಏನು ಎನ್ನುವುದು ಅರಿಯೆ. ಆದರೆ, ಒಂದಂತೂ ಅರ್ಥವಾಗಿದ್ದು ಸುಳ್ಳಿಗೆ ಹೆಚ್ಚು ಆಯಸ್ಸು ಇಲ್ಲ ಎಂಬುದು. ಸುಳ್ಳು ಎನ್ನುವುದು ಸತ್ಯವನ್ನು ಮರೆಮಾಚುವ ಅಡ್ಡ ಪರದೆ. ಮನುಷ್ಯ ಸತ್ಯಕ್ಕಿಂತಲೂ ವೇಗವಾಗಿ ಸುಳ್ಳನ್ನು ನಂಬುತ್ತಾನೆ ಯಾಕೆಂದರೆ ಕೇಳಲು, ನೋಡಲು ಆಕರ್ಷಿತವಾಗಿರುವುದು ಸುಳ್ಳೇ. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಸುಳ್ಳಿನ ಮೇಲಿಟ್ಟ ಸತ್ಯವೂ ಕತ್ತಲೆಯಾಗಿರುತ್ತದೆ. ಒಂದರ್ಥದಲ್ಲಿ ಮನುಷ್ಯ ಇವತ್ತು ಬದುಕುತ್ತಿರುವುದೇ ಸುಳ್ಳಿನಿಂದಲೇ ಅನ್ನಬಹುದು. ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲೂ, ಸಂದಿಗ್ಧ ಪರಿಸ್ಥಿತಿಗಳನ್ನು ಸಲೀಸಾಗಿ ಎದುರಿಸಲು ಸುಳ್ಳನ್ನು ಆಯುಧವಾಗಿ ಬಳಸಲಾಗುತ್ತದೆ. ಅದು ಎಷ್ಟು ಪರಿಣಾಮಕಾರಿಯಾಗಿರುತ್ತದೆಯೆಂದರೆ, ಅದೇ ಸತ್ಯವೆಂದು ಬಗೆದು ಅದರ ಹಿಂದೆ ನಡೆದು ಕೊನೆಗೆ ಸತ್ಯ ಕಣ್ಣು ತೆರ...

ನಿದ್ದೆಯಲ್ಲಿ ಮನುಷ್ಯ ತಪ್ಪೇ ಮಾಡಲ್ವಂತೆ..!

ಇಮೇಜ್
ಸು ರುಮ ಹಚ್ಚಿದಂತಿದ್ದ ಆಕೆಯ ಕಣ್ಣು ನೋಡಿ ಸಂತ 'ಯಾಕೆ ನಿದ್ದೆಯಿಲ್ಲವೇ' ಅಂತ ಕೇಳುತ್ತಾನೆ. ಆಕೆ ಅವಳದೇ ಮೌನ ಭಾಷೆಯಲ್ಲಿ ಹೌದು ಅಂದಾಗ ಸಂತ; “ನಿದ್ರಿಸಬೇಕು, ಚೆನ್ನಾಗಿ ನಿದ್ರಿಸಬೇಕು.., ನಿದ್ದೆಯಲ್ಲಿ ಭಗವಂತ ಮಾತ್ರ ಜೊತೆಗಿರುತ್ತಾನೆ, ಅದೇ ಈ ಉಸಿರು. ಗೊರಕೆ ಹೊಡೆಯುವವರ ಮೂಗಿನ ತುದಿಯಲ್ಲಿ ಪಿಶಾಚಿ ಇರುತ್ತದೆಯಂತೆ, ಆದರೆ ಈ ಪಿಶಾಚಿ, ಜಿನ್ನ್ ಎಲ್ಲ ಮನುಷ್ಯ ಎಚ್ಚರದಲ್ಲಿರುವಾಗಲಷ್ಟೇ ನಮ್ಮ ತಲೆಗೆ ಹತ್ತಿ ಕೂರುವುದು. ನಿದ್ದೆಯಲ್ಲಿ ಜಾತಿ-ಧರ್ಮ, ದ್ವೇಷ, ದುಃಖ ಯಾವುದೂ ಇಲ್ಲ, ಬರೀ ಸೃಷ್ಟಿಕರ್ತ ಮಾತ್ರ..” ಎನ್ನುತ್ತಾನೆ. ಇದು ಸೂಫಿಯುಂ ಸುಜಾದಯುಂ ಎಂಬ ಮಲಯಾಳಂ ಸಿನೆಮಾದಲ್ಲಿನ ಒಂದು ತುಣುಕು.  ಮನುಷ್ಯ ಮನಸ್ಸಿನ ತೃಪ್ತಿಗಾಗಿ ಅಲೆಯುತ್ತಾನೆ. ಸಂಕಟ, ದುಃಖ, ಸಂಕಷ್ಟ, ಸಮಸ್ಯೆ ಯಾವುದೂ ಇರಬಾರದೆಂದೂ ಬದಲು ಸಂತೋಷದಿಂದಲೇ ಕೂಡಿರಬೇಕೆಂಬ ವ್ಯಾಮೋಹದಲ್ಲಿರುತ್ತಾನೆ‌. ಆದರೆ, ಬಹುತೇಕ ಮನುಷ್ಯರಿಗೆ ಇದು ಸಾಧ್ಯವಾಗುವುದೇ ಇಲ್ಲ. ದಿನಕ್ಕೊಂದರಂತೆ ಸಮಸ್ಯೆಗಳು, ಕಾಡುವ ನೆನಪುಗಳು, ನೆರವೇರದ ಆಸೆಗಳು, ಕೆಲವೊಮ್ಮೆ ಸಾವಿನ ಭಯ..‌ಹೀಗೆ ನಾನಾರೀತಿಯಲ್ಲಿ ಮನುಷ್ಯನ ಮನಸ್ಸು ಚಂಚಲವಾಗುತ್ತಲೇ ಇರುತ್ತದೆ‌. ಹಗಲು ಹೊತ್ತಿನಲ್ಲಿ ತನ್ನ ಕಾಯಕದಲ್ಲಿ ಮಗ್ನನಾಗಿರುವುದರಿಂದ ಸಮಸ್ಯೆಗಳೆಲ್ಲ ಮನಸ್ಸನ್ನು ಹೊಂಚು ಹಾಕುವುದು ರಾತ್ರಿ ಪಾಳಿನಲ್ಲಿ. ನಿದ್ದೆ ಸುಳಿಯದ ರಾತ್ರಿಯಲ್ಲಿ ನಾವು ನೆನಪಿಸಬಾರದ್ದನ್ನೆಲ್ಲ ನೆನಪಿಸಿಕೊಳ್ಳುತ್...

ಪಂಜರದ ಗಿಣಿಗೆ ಸ್ವಾತಂತ್ರ್ಯವೆಲ್ಲಿ..??

ಇಮೇಜ್
ಪಂ ಜರದೊಳಗೆ ಬಂಧಿಸಲ್ಪಟ್ಟ ಗಿಣಿಯೊಂದು ಸ್ವಚ್ಛಂದವಾಗಿ ಹಾರುವುದನ್ನು ಬಯಸುತ್ತದೆ. ನಿರ್ಭಯದಿಂದ, ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ಬದುಕುವ ಕನಸು ಕಟ್ಟಿರುತ್ತದೆ. ಆದರೆ, ಅದರ ಯಜಮಾನನ ಸ್ವಾರ್ಥತೆಗೆ ತನ್ನ ಜಗತ್ತನ್ನು ಸಂಕುಚಿಗೊಳಿಸಬೇಕಾದ ಅನಿವಾರ್ಯತೆಗೆ ಬಂದಿರುತ್ತದೆ. ಪಕ್ಷಿ ಪ್ರೇಮಿ ಎನ್ನುತ್ತಲೇ ಒಬ್ಬಾತ ಪಕ್ಷಿಯನ್ನು ಪಂಜರದೊಳಗಿಡುವುದು ತಮಾಷೆ. ಆ ಗಿಣಿಗೆ ತನ್ನದೇ ಆದ ಸ್ವಾತಂತ್ರ್ಯವಿತ್ತು, ಬಾನೆತ್ತರದಲ್ಲಿ ಹಾರಾಡಿ ಜಗತ್ತು ಸುತ್ತುವ ಅವಕಾಶವಿತ್ತು. ತನ್ನ ಸಹಚರರ ಜೊತೆ ಬೆರೆತು ಬದುಕುವ ಸುಂದರ ವಾತಾವರಣವನ್ನು ಕಳೆದುಕೊಂಡು ಸಂಕುಚಿತ ಬದುಕಿನಲ್ಲೇ ಕಾಲವಾಗುತ್ತದೆ. ಭಾರತ 73 ನೇ ಸ್ವತಂತ್ರದಿನದ ಸಂಭ್ರಮದಲ್ಲಿದೆ. ಬಿಳಿಯರಿಂದ ಆಕ್ರಮಿಸಲ್ಪಟ್ಟ ಪ್ರಬುದ್ಧ ಭಾರತವನ್ನು ಮರಳಿ ಪಡೆದ ಸಂಭ್ರಮ. ಇಲ್ಲಿ ಹೋರಾಡಿದವರು, ಜೀವತ್ಯಾಗ ಮಾಡಿದ ಮಹಾನರು, ಸಿಪಾಯಿಗಳು ಎಲ್ಲರನ್ನೂ ನೆನಪಿಸುತ್ತಲೇ ಆಗಸ್ಟ್ 15 ಮುಗಿದುಹೋಗುತ್ತದೆ. ವ್ಯಾಪಾರದ ನೆಪದಲ್ಲಿ ಕಡಲು ದಾಟಿ ಬಂದ ಬ್ರಿಟಿಷರು ಇಲ್ಲಿನ ದೌರ್ಬಲ್ಯವನ್ನರಿತು ಹೂಡಿದ ತಂತ್ರದಿಂದ ಇಡೀ ಭಾರತವನ್ನು ತನ್ನ ತೆಕ್ಕೆಗೆಳೆದುಕೊಂಡಾಗ ಇಲ್ಲಿನ ಮೂಲ ನಿವಾಸಿಗಳು ಗುಲಾಮರಾಗಬೇಕಾಯಿತು. ಸಂಪದ್ಭರಿತ ಸುಂದರ ಭಾರತದ ಬೊಕ್ಕಸ ಕೊಳ್ಳೆಹೊಡೆದು ದೇಶವನ್ನು ಬಡತನಕ್ಕೆ ತಳ್ಳಿದ್ದು, ಇದರ ವಿರುದ್ಧ ಮಾತೆತ್ತಿದ ಪ್ರಜ್ಞಾವಂತರ ಮುಂದೆ ತುಪಾಕಿಯ ಗುರಿಯಿಟ್ಟಿದ್ದು, ಬಿಳಿಯರ ಗುಲಾಮರಾಗಿದ್ದುಕೊಂಡು...

ನೆಟ್ವರ್ಕ್ ಮಾರ್ಕೆಟಿಂಗ್; ನಾವು ಮೋಸ ಹೋಗುತ್ತಿದ್ದೇವೆ..!?

ಇಮೇಜ್
ಮ ನುಷ್ಯ ಇವತ್ತು ಹಣದ ಹಿಂದೆ ಓಡುತ್ತಿದ್ದಾನೆ. ಸುಲಭದಲ್ಲಿ ಹಣ ಸಂಪಾದಿಸುವುದು, ಬಲುಬೇಗನೆ ಶ್ರೀಮಂತನಾಗುವ ಕನಸನ್ನು ಎಲ್ಲರೂ ಕಟ್ಟಿಕೊಂಡಿರುತ್ತಾರೆ. ಅದಕ್ಕಾಗಿ ಅಡ್ಡಾದಿಡ್ಡಿ ಓಡಾಡುತ್ತಾ, ಹಣದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮನುಷ್ಯ ತನ್ನ ಕೈಯಲ್ಲಿ ಒಂದಿಷ್ಟು ಹಣ ಬಂದಾಗ ಲೋಕವನ್ನೇ ಮರೆತು ಬೀಗುತ್ತಾನೆ. ಅಹಂಕಾರದ ದಿವಾಳಿಯಾಗಿ, ನಡೆದು ಬಂದ ದಾರಿಯನ್ನೂ ಮರೆತು ಕೆಲವೊಮ್ಮೆ ಬದುಕಿನ ಕ್ಷಣಿಕ ಸುಖಗಳಿಗೆ ಮಾರುಹೋಗುತ್ತಾನೆ. ಬದುಕಲು ಹಣ ಅಗತ್ಯ, ಆದರೆ ಹಣ ಸಂಪಾದಿಸಲೆಂದೇ ಬದುಕಬಾರದು. ಸಂಪಾದನೆಯ ಜೊತೆಗೆ ಸನ್ಮನಸ್ಸನ್ನು ಬೆಳೆಸಿಕೊಂಡು, ಕೈಲಾಗದವರಿಗೆ ನಮ್ಮಿಂದಾಗುವ ಸಹಾಯ, ಸಹಕಾರ ನೀಡುವ ಮೂಲಕ ಜೀವನ ಅರ್ಥಪೂರ್ಣವಾಗಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಇಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಅದಲ್ಲ, ಕಳೆದ ವರ್ಷ ಅಂದರೆ 2019 ರ ಸೆಪ್ಟೆಂಬರ್ ನಲ್ಲಿ ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಶುಕೂರ್ ಎಂಬ 35 ವರ್ಷ ಪ್ರಾಯದ ಯುವಕನೊಬ್ಬನ ಹತ್ಯೆಯಾಗುತ್ತದೆ. ಆತನನ್ನು ಕೊಲೆಗೈದಿದ್ದು ಆತನ ಸ್ನೇಹಿತರೇ ಆಗಿತ್ತು. ಪೋಲೀಸರು ಇದರ ಹಿಂದೆ ತನಿಖೆ ನಡೆಸಿದಾಗ ಬೆಳಕಿಗೆ ಬಂದ ಬೆಚ್ಚಿಬೀಳಿಸುವ ಸುದ್ದಿಯೆಂದರೆ, ಶುಕೂರ್ ಮತ್ತು ಆತನ ತಂಡ ಗೆಳೆಯರನ್ನೂ ಸೇರಿಸಿ, ಇಡೀ ಜಿಲ್ಲೆಯಿಂದ ಸುಮಾರು 450 ಕೋಟಿಯಷ್ಟು ಹಣವನ್ನು ಕಬಳಿಸಿದ್ದಾನೆ ಅನ್ನುವುದಾಗಿತ್ತು. Bitcoin ಹೆಸರಿನಲ್ಲಿ ದಂಧೆ ನಡೆಸಿ, ಜನರನ್ನು ಮೋಸದ ಜಾಲಕ್ಕೆ ಬಲಿಯಾಗಿಸಿ ಹಣ ದೋಚಿದ...

ಊರ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರು..

ಇಮೇಜ್
ಸ ರಿ-ತಪ್ಪುಗಳಾಚೆಗೆ ವಿಮರ್ಶೆಯೆತ್ತಿಕೊಂಡಾಗ ಸಾಮಾನ್ಯವಾಗಿ ಜನರು ತಮ್ಮ ನಿಲುವಿನಲ್ಲೇ ಸಮರ್ಥನೆ ಮಾಡಿಕೊಳ್ಳುತ್ತಾರೆ ವಿನಃ ಸತ್ಯ ಮತ್ತು ನ್ಯಾಯದ ಕುರಿತಾಗಿ ಹೆಚ್ಚಿನವರು ಯೋಚಿಸಲಾರರು. ತಪ್ಪುಗಳನ್ನು ಒಪ್ಪಿಕೊಂಡು ಅದರ ಮೂಲಕ ಸರಿದಾರಿಯಲ್ಲಿ ಬಿದ್ದಿರುವ ಕಲ್ಲುಮುಳ್ಳು ಬದಿಗೆ ಸರಿಸಿ ಮುನ್ನಡೆಯುವ ಮನಸ್ಸಿದ್ದರೆ ಮನುಷ್ಯ ಪರಿಪೂರ್ಣನಾಗುತ್ತಾನೆ. ವಾಸ್ತವದಲ್ಲಿ ಇಲ್ಲಿ ಪರಿಪೂರ್ಣರು ಯಾರೂ ಇಲ್ಲ. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ತಪ್ಪುಗಳಿರುತ್ತವೆ, ಕೆಲವೊಮ್ಮೆ ಸಂದರ್ಭಕ್ಕನುಗುಣವಾಗಿ ಆ ಕ್ಷಣಕ್ಕೆ ತಪ್ಪು ಸರಿಯಾಗಲೂಬಹುದು. ಹೇಳಿ ಬರುತ್ತಿರುವುದು ಮೊನ್ನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ. ಪ್ರವಾದಿ ನಿಂದನೆಯ ಕಾರಣಕ್ಕೆ ಜನ ಆಕ್ರೋಶಗೊಂಡು ಅತಿರೇಕದ ವರ್ತನೆ ಮಾಡಿದ್ದಾರೆ ಎನ್ನುವುದಷ್ಟೇ ಸುದ್ದಿಯಾಯಿತು. ಗಲಭೆ ಬುಗಿಲೆದ್ದು ಮೂರು ಅಮಾಯಕ ಯುವಕರ ಪ್ರಾಣಕ್ಕೂ ಕುತ್ತು ತಂದಿತ್ತು. ನೂರಾರು ಮಂದಿ ಕತ್ತಲು ತುಂಬಿದ ಕಂಬಿಕೋಣೆಯಲ್ಲಿ ಬಂಧಿಸಲ್ಪಟ್ಟರು. ಪ್ರಕರಣದ ಪೂರ್ಣ ಹೊಣೆಯನ್ನು ನಿರ್ದಿಷ್ಟ ಪಕ್ಷವೊಂದಕ್ಕೆ, ಧರ್ಮವೊಂದಕ್ಕೆ ಎತ್ತಿಕಟ್ಟಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಉರಿಯುತ್ತಿರುವ ಬೆಂಕಿಯಲ್ಲಿ ಚಳಿಕಾಯಿಸಿಕೊಂಡಾಗ ಸಾಥ್ ನೀಡಿದ್ದು ಸಾಮಾಜಿಕ  ಪ್ರಗತಿಪರರೆನಿಸಿಕೊಂಡವರಲ್ಲಿ ಕೆಲವರು. ರಾಜಕೀಯದಲ್ಲಿ ಇದು ಸಹಜವೇ. ಸಾವಿನಲ್ಲೇ ಅವರು ಬದುಕುತ್ತಿದ್ದಾರೆ. ಮಾಧ್ಯಮಗಳೂ ಅವರ ಎಂಜಲಿನಲ್ಲೇ ಹೊ...

ನೆಟ್ವರ್ಕ್ ಮಾರ್ಕೆಟಿಂಗ್; ಮರು ಅವಲೋಕನ

ಇಮೇಜ್
ಕ ಳೆದ ವಾರದ 'ನೆಟ್ವರ್ಕ್ ಮಾರ್ಕೆಟಿಂಗ್; ನಾವು ಮೋಸ ಹೋಗುತ್ತಿದ್ದೇವೆ' ಎನ್ನುವ ಬರಹವು ಸಣ್ಣ ಮಟ್ಟಿನಲ್ಲಿ ಚರ್ಚೆಗೀಡಾಗಿಸಿದೆ. ಓದಿದವರ ಪೈಕಿ ಬಹುತೇಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಕೂಡ, ಕೆಲವು ಮಂದಿ ನಾನು ಬರೆದ ವಿಚಾರ ಸರಿಯಿಲ್ಲ, ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ಮೋಸ ಹೋಗುವಂತದ್ದೇನೂ ಇಲ್ಲ ಎಂಬ ವಾದವನ್ನಿಟ್ಟಿದ್ದರು. ಹಾಗಾಗಿ ಮತ್ತೊಮ್ಮೆ ಈ ವಿಷಯದ ಬಗ್ಗೆ ಇಣುಕಿ ನೋಡಬೇಕಾಯ್ತು. Network Marketing ಎಂಬುವುದು ಗ್ರಾಹಕರಿಗೆ ಉತ್ಪನ್ನಗಳನ್ನು ನೇರವಾಗಿ ಮಾರಾಟಮಾಡುವುದು, ಅಂದರೆ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ಉತ್ಪಾದನೆಯ ಕಂಪನಿಯಿಂದ ಬೇಡಿಕೆದಾರರಿಗೆ ಮಾರುವ ಪ್ರಕ್ರಿಯೆ. ಇದನ್ನು Multi Level Marketing, Refferal Marketing, Direct Selling, Social Selling ಎಂಬಿತ್ಯಾದಿ ಹೆಸರಿನಲ್ಲಿ ಕರೆಯಲಾಗುತ್ತದೆ. ಆದರೆ, ನಾನು ಕಳೆದ ಲೇಖನದಲ್ಲಿ ಪ್ರಸ್ತಾಪಿಸಿದ ವಿಚಾರ ಇದೇ ಹೆಸರಿನಲ್ಲಿ ಈಗ ನಡೆಯುತ್ತಿರುವ ದಂಧೆಯ ಕುರಿತು. ಅಂದರೆ, ಇಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ‌, ವಸ್ತುಗಳ ಮಾರಾಟವೂ ಆಗುವುದಿಲ್ಲ, ಬದಲಾಗಿ ಒಂದು ಮೊತ್ತವನ್ನು ನಿಕ್ಷೇಪಿಸಿ ಅದರಿಂದ ಪ್ರತಿದಿನ/ವಾರ/ತಿಂಗಳಿಗೆ ಯಾವುದೇ ದುಡಿಮೆಯಿಲ್ಲದೆ ಲಾಭ ಗಳಿಸುವ ಪ್ರಕ್ರಿಯೆ. ಒಂದರ್ಥದಲ್ಲಿ Pyramid Scheme. ಇದನ್ನು ಕೂಡ MLM ಪ್ರಬೇಧದಡಿಯಲ್ಲೇ ಗುರುತಿಸಲಾಗುತ್ತಿದೆ. Multi level marketing ಅಥವಾ n...

ಸ್ಮೈಲ್ ಪ್ಲೀಸ್..

ಇಮೇಜ್
ಕೊ ರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಡೀ ವಿಶ್ವದಲ್ಲಿ ಭಾರತ ಮೊದಲಿಗೆ ಬಂದು ನಿಂತಿದೆ. ಹದಗೆಟ್ಟ ದೇಶದ ಆರ್ಥಿಕತೆ, ಕಂಗೆಟ್ಟ ಜನಸಾಮಾನ್ಯರು, ಉದ್ಯೋಗವಿಲ್ಲದ ಪರಿಸ್ಥಿತಿ, ವಾಣಿಜ್ಯ ಕ್ಷೇತ್ರಗಳೆಲ್ಲ ಪಾತಾಳಕ್ಕಿಲಿಯುತ್ತಿದ್ದರೂ, ಯಜಮಾನನಿಗೆ ಫೋಟೋಶೂಟ್ ಚಿಂತೆ. ನವಿಲಿಗೆ ಕಾಳು ಹಾಕುವುದು, ಒಂದೇ ಬಾರಿ ಎರಡು ಇಂಗ್ಲಿಷ್ ಪುಸ್ತಕ, ಪತ್ರಿಕೆ ಓದುವುದರ ಜೊತೆಗೆ ಲ್ಯಾಪ್‌ಟಾಪ್‌ ಲ್ಲೂ ಕೆಲಸ ಮಾಡುವ ಭಂಗಿ, ಬಾತುಕೋಳಿಗಳ ಜೊತೆ ಮಾತುಕತೆ, ಗಿಟಾರ್ ಹಿಡಿದು ಆಕಾಶ ನೋಡುವ ಹೊಸ ಪೋಸು.... ಹೀಗೆ ವಿಧವಿಧ ಶೈಲಿಯಲ್ಲಿ ಯಜಮಾನನ ಫೋಟೋಗಳು ದಿನೇದಿನೇ ಬರುತ್ತಿರುವುದು ವಿಶೇಷ. 'ಸರ್ವಾಧಿಕಾರಿಗಳೆಲ್ಲರೂ ಶೋಕಿ ಮಾಡುವವರಂತೆ.' ಎಲ್ಲೋ ಕೇಳಿದ ನೆನಪು. ಈಗ ನಮ್ಮ ಯಜಮಾನನ ಶೋಕಿ ಕಾಣುವಾಗ ಈ ಮಾತು ಸುಳ್ಳು ಅನ್ನುವಂತೆಯೂ ಇಲ್ಲ, ನಮ್ಮ ಪ್ರಭು ಸರ್ವಾಧಿಕಾರಿಯಲ್ಲ ಅಂತ ಒಂದೇ ನೋಟಕ್ಕೆ ಹೇಳುವಂತೆಯೂ ಇಲ್ಲ. ದೇಶದ ಪರಿಸ್ಥಿತಿ ಬಿಗಡಾಯಿಸಿದ್ದರೂ ಕೂಡ, ಆ ಕಡೆಗೆ ಕಿಂಚಿತ್ತೂ ಗಮನ ಕೊಡದೇ ಆಡಂಬರ ಬದುಕಿನಲ್ಲೇ ಮಾರು ಹೋಗಿರುವ ರಾಜ ಭಾರತವನ್ನು ಎಲ್ಲಿತನಕ ಹಾಯಿಸುತ್ತಾರೆಂಬುದು ಪ್ರಶ್ನಾರ್ಥಕ..? ಹಸಿವು, ರೋಗ, ಬಡತನ, ಪ್ರಾಕೃತಿಕ ವಿಕೋಪಗಳಿಂದೆಲ್ಲಾ ದೇಶದ ಜನತೆ ಬಹಳಷ್ಟು ನೊಂದುಕೊಂಡಿದ್ದರೂ, ಸೂರಿಲ್ಲದೆ, ಅನ್ನವಿಲ್ಲದೆ ಅಲೆದಾಡುತ್ತಿರುವ ಸನ್ನಿವೇಶವಿದ್ದರೂ, ಉದ್ಯೋಗವಿಲ್ಲದೆ ಯುವಜನತೆ ಪರದಾಡುವ ಪರಿಸ್ಥಿತಿಯಲ್ಲೂ, ಜಾತಿ-ಧರ್...

ಗಾಂಜಾ ತುಳಸಿಯಾದ ಕಥೆ..!!

ಇಮೇಜ್
“ನಾರ್ಕೋಟಿಕ್ಸ್ ಈಸ್ ಎ ಡರ್ಟೀ ಬಿಸ್ನಸ್ (Narcotics is a dirty business)” ಮಲಯಾಳಂ ನ 'ಲೂಸಿಫರ್' ಎಂಬ ಸಿನೆಮಾದಲ್ಲಿ ತೂಕದ ಮಾತೊಂದಾಗಿತ್ತು ಇದು. ಅಲ್ಲಿ ಡ್ರಗ್ ಮಾಫಿಯಾ ದಂಧೆಯಾಗುವ ರೀತಿಯನ್ನು, ಅದರ ಹಿಂದೆ ಕಾಣದ ಕೈಗಳಾಗಿರುವ ರಾಜಕಾರಣಿಗಳು, ಕಾರ್ಪೊರೇಟರ್ ಗಳ ಪಾತ್ರದ ಚಿತ್ರಣವನ್ನು ನೀಡಲಾಗಿತ್ತು. ಸಮಾಜಕ್ಕೆ ಇನ್ನೂ ಸಮಸ್ಯೆಯಾಗಿರುವ ಮಾದಕ ದ್ರವ್ಯದ ಪಿಡುಗುಗಳ ಹಿಂದೆ ನಿಗೂಢವಾದ ಒಂದು ಮಾಯಾಜಾಲವೇ ಅಡಗಿದೆ ಎಂಬ ವಿಚಾರ ಸ್ಪಷ್ಟ. ಹಾಗಾಗಿಯೇ ಲೂಸಿಫರ್' ಲ್ಲಿ 'ಮಾದಕ ವಸ್ತು ಒಂದು ಕೊಳಕು ವ್ಯವಹಾರ' ಎಂಬ ಮಾತು ಗಟ್ಟಿಧ್ವನಿಯಾಗಿದ್ದು. ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ ಈ ಒಂದು ಮಾತು ಮನಸ್ಸಿನೊಳಗೆ ಓಡಾಡುತ್ತಿತ್ತು. ತೆರೆಯಲ್ಲಿ ಕಾಣುವ ಸಿನೆಮಾ ಎಂಬ ಅದ್ಭುತದ ಮರೆಯಲ್ಲಿ ವ್ಯತಿರಿಕ್ತವಾದ ಲೋಕವೊಂದಿದೆ. ಚಿತ್ರರಂಗದಲ್ಲಿ ಮಾದಕ ವಸ್ತುಗಳ ವ್ಯವಹಾರದ ಕುರಿತು ಸದ್ದು ಕೇಳಿಸುವುದು ಇದೇನೂ ಮೊದಲಲ್ಲ. ಈ ಹಿಂದೆ ಮಲಯಾಳಂ ಫಿಲಂ ಇಂಡಸ್ಟ್ರಿ ಯಲ್ಲೂ ಇದೇ ರೀತಿಯ ಒಂದು ಚರ್ಚೆ ತಲೆಯೆತ್ತಿಕೊಂಡಿತ್ತು. ಯುವ ನಟ ಶೇನ್ ನಿಗಮ್ ವಿಚಾರವಾಗಿ ಆರಂಭಗೊಂಡು ಡ್ರಗ್ಸ್ ಜಾಲದ ಕುರಿತಾಗಿ ಮಾತುಗಳಾಗಿದ್ದರೂ ಕೂಡ ಅಷ್ಟೇ ವೇಗದಲ್ಲಿ ಆ ಧ್ವನಿ ಮೌನವಾಗಿ ಹೋಗಿತ್ತು. ಹೆಚ್ಚಾಗಿ ಈ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವುದು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪ್ರಖ್ಯಾತ ಉದ್ಯಮಿಗಳೇ ...

ಸುವಿಚಾರ ಆನ್‌ಲೈನ್ ಮಾಸಿಕ | ಸೆಪ್ಟೆಂಬರ್ 2020

ಇಮೇಜ್
ಸುವಿಚಾರ ಆನ್‌ಲೈನ್ ಮಾಸಿಕ | ಸಂಚಿಕೆ-೨ | ಸೆಪ್ಟೆಂಬರ್ ೨೦೨೦ ಇಲ್ಲಿ ಕ್ಲಿಯರ್ ಆಗಿ ಓದಲು ಆಗುವುದಿಲ್ಲವೆಂದಾದರೆ, ಇಲ್ಲಿ ಕ್ಲಿಕ್ ಮಾಡಿ Google Drive ಮೂಲಕ ಓದಬಹದು. PDF ಪ್ರತಿಗಾಗಿ +918971046427 ನಂಬರಿಗೆ WhatsApp ನಲ್ಲಿ ಸಂಪರ್ಕಿಸಿರಿ.

ಭಾರತ ವಿಶ್ವಗುರುವಾಗುತ್ತಿದೆ..!!

ಇಮೇಜ್
ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ದೇಶ ಉನ್ನತಿಗೇರಬೇಕು ಎಂಬ ಕನಸಿದೆ. ಸಂಪ್ರದಾಯ, ಸಂಸ್ಕೃತಿ, ವೈವಿಧ್ಯತೆಗಳಿಂದ ಭಾರತ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ತಲೆಯೆತ್ತಿ ನೋಡಬೇಕು, ನಮ್ಮ ದೇಶದ ಖ್ಯಾತಿ ಜಗತ್ತಿನುದ್ದಗಲಕ್ಕೆ ವ್ಯಾಪಿಸಿ ಇದು ಸುಸಂಕೃತ, ಸಂಪದ್ಭರಿತ ಮತ್ತು ಸಾಹೋದರ್ಯದಿಂದ ಮನ್ನಣೆ ಗಳಿಸಿ ಜಗತ್ತಿನ ಗುರುವಾಗಬೇಕು ಎಂಬ ಮೋಹ ನಮಗಿದೆ. 'ವಿಶ್ವಗುರು' ಎಂಬ ಪರಿಕಲ್ಪನೆಯಡಿಯಲ್ಲಿ ವರ್ಷಗಳ ಹಿಂದೆ ಚಕ್ರವರ್ತಿ ಸೂಲಿಬೆಲೆಯವರು ಒಂದು ಭಾಷಣದಲ್ಲಿ '2017 ಕ್ಕೆ ಭಾರತ ವಿಶ್ವಗುರುವಾಗುತ್ತದೆ' ಎಂದು ಹೇಳಿದ್ದರು. ಅದನ್ನೇ ಮಾನದಂಡವಾಗಿಸಿಕೊಂಡು ಒಂದು ಬಣ ಈಗಾಗಲೇ ಭಾರತ ವಿಶ್ವಗುರುವಾಗಿದೆ ಎಂಬ ವಾದದೊಂದಿಗೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಕಾರಣದಿಂದ ಇದು ಸಾಧ್ಯವಾಯಿತು ಎಂಬ ತರ್ಕವನಿಟ್ಟಿದ್ದಾರೆ. ಅವರ ಪ್ರಕಾರ ಇವತ್ತು ಭಾರತ ಜಗತ್ತಿನ ಗುರು, ಪ್ರತಿಯೊಂದರಲ್ಲೂ ಭಾರತ ಮೇಲುಗೈ, ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತವನ್ನು ಮಾದರಿಯಾಗಿಸಿಕೊಂಡಿದೆಯಂತೆ. ಇದಕ್ಕೆ ಪೂರಕವೆಂಬಂತೆ ನಕಲಿ ಸಾಧನೆಗಳ ಪಟ್ಟಿಯೊಂದಿಗೆ ಅವರು ಮುಂದೆ ಬರುತ್ತಿದ್ದಾರೆ. ವಿಶ್ವಗುರು ಆಗಬೇಕಾದರೆ ಇರಬೇಕಾದ ಕನಿಷ್ಠ ಮಾನದಂಡವೇನು ಎಂಬುದರ ಬಗ್ಗೆಯೂ ಅರಿವಿಲ್ಲದೆ ಭಾರತದ ಮೇಲಿನ ಪ್ರೀತಿ ಎಂಬ ಪರದೆಯಡಿಯಲ್ಲಿ ನರೇಂದ್ರ ಮೋದಿಯನ್ನು ಪೂಜಿಸುವ ಪರಿಯಿಂದಾಗಿ ಸರಕಾರದ ವೈಫಲ್ಯತೆಗಳು ಮತ್ತ...

ಕೊರೋನಾ; ಜನರು ಮೋಸ ಹೋಗುತ್ತಿದ್ದಾರೆ..

ಇಮೇಜ್
ಕಳೆದ ಕೆಲವು ತಿಂಗಳುಗಳಿಂದ ಜಗತ್ತನ್ನು ತಲ್ಲಣಗೊಳಿಸಿದ ಕೊರೋನಾ ವೈರಸ್ ನ ಅಟ್ಟಹಾಸ ನಮ್ಮ ಭಾರತದಲ್ಲಿ ಈಗೀಗ ತೀವ್ರಗೊಳ್ಳುತ್ತಿದೆ. ಸುಮಾರು ಎಂಟೂವರೆ ಲಕ್ಷದಷ್ಟು ಮಂದಿಗೆ ಸೋಂಕು ಅಂಟಿಕೊಂಡಿದ್ದು, ಐದು ಲಕ್ಷದಷ್ಟು ಜನರು ಗುಣಮುಖರಾಗಿದ್ದಾರೆ ಜೊತೆಗೆ ಈ ತನಕ 22,674 ಮಂದಿ ಸೋಂಕಿನಿಂದಾಗಿ ಮರಣವನ್ನಪ್ಪಿದ್ದಾರೆ‌ ಎಂಬ ಮಾಹಿತಿಯಿದೆ. ಕೋವಿಡ್-೧೯ ಮೊದಮೊದಲು ಚೀನಾ, ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಹೆಚ್ಚಾಗಿ ಭೀತಿ ಹುಟ್ಟಿಸಿದ್ದರೂ, ಬಹುತೇಕ ರಾಷ್ಟ್ರಗಳು ಇದನ್ನು ತಕ್ಕಮಟ್ಟಿಗೆ ಮೆಟ್ಟಿನಿಲ್ಲುವಲ್ಲಿ ಸಫಲವಾಗಿದೆ. ಆದರೆ ಭಾರತ ಅತಂತ್ರ ಸ್ಥಿತಿಯತ್ತ ಮುನ್ನುಗ್ಗುತ್ತಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಕೊರೋನಾ ಸೋಂಕಿತ ಮೂರನೇ ರಾಷ್ಟ್ರವಾಗಿ ಭಾರತ ಮುಂದುವರಿಯುತ್ತಿದೆ.  ದೇಶದಲ್ಲಿ 500-1000 ಸೋಂಕು ಪ್ರಕರಣ ಕಂಡುಬಂದಾಗ ಸಂಪೂರ್ಣ ಲಾಕ್ಡೌನ್ ಹೇರುವ ಮೂಲಕ ವೈರಸ್ ನಿಯಂತ್ರಣಕ್ಕೆ ಶ್ರಮಿಸಲಾಗಿತ್ತು. ಆದರೆ, ಕ್ರಮೇಣ ಪ್ರಕರಣಗಳು ಹೆಚ್ಚುತ್ತಿದ್ದಂತೆ ನಿಯಂತ್ರಣಗಳನ್ನು ಸಡಿಲಗೊಳಿಸಿದ್ದೇ ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಕಾರಣವಾಗಿದೆ ಎಂಬುದು ಸತ್ಯ ಸಂಗತಿ. ಕೊರೋನಾ ವಿರುದ್ಧದ ಸಮರಕ್ಕೆ ಪ್ರಾರಂಭದಲ್ಲಿ ಕಂಡುಬಂದ ಮುನ್ನೆಚ್ಚರಿಕೆಗಳು ಸಂಖ್ಯೆ ಏರುತ್ತಿದ್ದಂತೆ ಕಡಿಮೆಯಾಗತೊಡಗಿದೆ. ದೇಶದಲ್ಲಿ ಸೋಂಕು ಈಗಲೂ ಬಹಳ ವ್ಯಾಪಕವಾಗಿ ಹರಡುತ್ತಿದ್ದು, ಇನ್ನೂ ದೊಡ್ಡ ಮಟ್ಟದಲ್ಲಿ ತೊಂದರೆಯನ್ನುಂಟು ಮಾಡಬಹುದೋ ಎಂಬ...

ಲಡಾಖ್ ಭೇಟಿ; ಒಂದು ಪ್ರಹಸನ

ಇಮೇಜ್
ಅದೊಂದು ವಿಶಾಲವಾದ ಕೋಣೆ. ಆಗಷ್ಟೇ ತರಿಸಿದ್ದ ಹತ್ತಿಪ್ಪತ್ತು ಹೊಸ ಮಂಚಗಳಲ್ಲಿ ಸ್ಟಿಕರ್ ಕೂಡ ಕಿತ್ತು ಹೋಗಿರದ ಬೆಡ್ ಮೇಲೆ ಹಾಸಲಾಗಿದ್ದ ಹೊದಿಕೆ. ನಮ್ಮ ಕಥಾ ನಾಯಕ ಬರುವ ಹೊತ್ತಿಗೆ ಒಂದಷ್ಟು ಮಂದಿ ಅದನ್ನೇರಿ ಒಂದೇ ಭಂಗಿಯಲ್ಲಿ ಕುಳಿತು ಸ್ವಲ್ಪ ಹೊತ್ತಿಗೆ ಗಾಯಾಳುಗಳಾಗುತ್ತಾರೆ. ಗಾಯದ ಸಣ್ಣ ಚುಕ್ಕೆಯೂ ಅಲ್ಲಿ ಕಂಡುಬರಲಿಲ್ಲ. ಅವರು ಹೇಳುವಂತೆ ಅದೊಂದು ಚಿಕಿತ್ಸಾ ಕೊಠಡಿ. ಪ್ರಾಜೆಕ್ಟರ್ ಮತ್ತು ಸ್ಕ್ರೀನ್ ಬೋರ್ಡ್ ಅಳವಡಿಸಲಾಗಿರುವ ವಿನೂತನ ಶೈಲಿಯ ಚಿಕಿತ್ಸಾ ಕೊಠಡಿ... ಅಲ್ಲಿ ಔಷಧಿಗಳನ್ನಿಡುವುದಕ್ಕಾಗಿ ಟೇಬಲ್ ಗಳಿರಲಿಲ್ಲ, ಗ್ಲುಕೋಸ್ ಸ್ಟಾಂಡ್ ಇರಲಿಲ್ಲ, ನೀರಿನ ಬಾಟಲಿಗಳಿರಲಿಲ್ಲ.. ಅಷ್ಟೇ ಯಾಕೆ ಒಬ್ಬನೇ ಒಬ್ಬ ಡಾಕ್ಟರ್ ಕೂಡ ಅಲ್ಲಿ ಕಾಣಲು ಸಿಗಲಿಲ್ಲ. ಹಾಗಂತ ಅವರಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಅಂತ ಕೇಳಿದರೆ, ಪ್ರಬುದ್ಧವಾದ ಉತ್ತರವೊಂದಿದೆ, ಆಧುನಿಕ ತಂತ್ರಜ್ಞಾನ ಬಳಸಿ ಗಾಯಾಳುಗಳಿಗೆ ಪ್ರಾಜೆಕ್ಟರ್ ಸಹಾಯದಿಂದ ಪಾಠ ಹೇಳಿಕೊಡುವ ಮೂಲಕ ಎಂದು. ಇದೆಲ್ಲವೂ ನಮ್ಮ ಭಾರತದಲ್ಲಷ್ಟೇ ಸಾಧ್ಯ ಎಂಬುದು ಕೂಡ ಗಮನಾರ್ಹ. ಜೂನ್ 15 ರಂದು ಗುಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಕದನದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಐವತ್ತರಷ್ಟು ಮಂದಿ ಗಾಯಗೊಂಡಿದ್ದರು ಎಂಬ ಮಾಹಿತಿಯೂ ಬರುತ್ತಿದೆ. ಇದು ನಮ್ಮಲ್ಲಿ ಬಹಳ ಗಾಢವಾಗಿ ರೀತಿಯಲ್ಲೇ ಚರ್ಚೆಯಾದಾಗ, ನಮ್ಮ ಪ್ರಧಾನಿ ನರೇಂದ್ರ ...

ಆ ಸಾವು ಅನ್ಯಾಯವಾಗಿತ್ತು..

ಇಮೇಜ್
ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗನನ್ನು ಪೋಲೀಸರು ಅಮಾನುಷವಾಗಿ ಹಲ್ಲೆಗೈದು ಕೊಂದಿರುವ ವಿಚಾರ ಇವತ್ತು ಬಹಳಷ್ಟು  ಚರ್ಚೆಯಾಗುತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘನೆಯ ವಿಷಯವಾಗಿ ಜಯರಾಜ್ ಎಂಬ ವರ್ತಕನನ್ನು  ಪೋಲೀಸರು ಬಂಧಿಸಿ, ಹೀನಾಯವಾಗಿ ಹಿಂಸಿಸುತ್ತಾರೆ. ಅದನ್ನು ಪ್ರಶ್ನಿಸಲು ಬಂದ ಮಗ ಬೆನಿಕ್ಸ್ ನನ್ನೂ ಕೂಡ ಪೋಲೀಸರು ಕ್ರೂರವಾಗಿ ದೌರ್ಜನ್ಯವೆಸಗಿ ಸಾವಿನ ಕಡೆಗೆ ತಳ್ಳುತ್ತಾರೆ. ಹಲ್ಲೆಯ ಕ್ರೂರತೆ ಹೇಗಿತ್ತೆಂದರೆ, ಗುದದ್ವಾರದೊಳಗೂ ಲಾಠಿಯನ್ನು ತುರುಕಿಸಿ ಬಹಳ ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಮೊಣಕಾಲಿನ ಚಿಪ್ಪು ಒಡೆದು ರಕ್ತ ಧಾರಾಕಾರವಾಗಿ ಹರಿಯುತ್ತಿದ್ದರೂ ಎಳ್ಳಷ್ಟೂ ಕರುಣೆ ತೋರದ ಪೋಲೀಸರು ಕೊನೆಗೆ ಇಬ್ಬರ ಸಾವಿನಲ್ಲಿ ಮುಗಿಸುತ್ತಾರೆ. ತೂತುಕುಡಿ ಎಂದಾಕ್ಷಣ ನಮಗೆ ಬೇಗನೇ ನೆನಪಿಗೆ ಬರುವ ಘಟನೆಯೆಂದರೆ, 2018 ರ ಮೇ ತಿಂಗಳ ಆ ದುರಂತ. 1998 ರಲ್ಲಿ ನಿರ್ಮಾಣವಾದ ಕಾಪರ್ ಸ್ಮೆಲ್ಟರ್ ಪ್ಲಾಂಟ್ ನ್ನು ವಿರೋಧಿಸಿ ಅಲ್ಲಿನ ಜನ ಬೀದಿಗಿಳಿದಿದ್ದರು. ಆರಂಭದಲ್ಲೇ ಹೋರಾಟಗಳು ನಡೆದಿದ್ದರೂ ಕೂಡ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಮುಂದಕ್ಕೆ 2018 ರಲ್ಲಿ ಒಂದು ಕ್ರಾಂತಿ ಹುಟ್ಟಿಕೊಂಡಿತ್ತು. ಆ ಪ್ಲಾಂಟ್ ನ ವಿರುದ್ಧದ ಶಬ್ಧದ ತೀವ್ರತೆ ಕಾರ್ಪೊರೇಟ್ ಕಂಪೆನಿಗೆ ಬಹುದೊಡ್ಡ ಸವಾಲಾಗಿತ್ತು. ಪ್ರತಿಭಟನೆಯು ತೀವ್ರ ಸ್ವರೂಪಕ್ಕೆ ಬಂದಾಗ ಪೋಲೀಸರು ಅಧಿಕಾರಿಗಳ ಒತ್ತಡಕ್ಕೆ ಮಣಿದು ಗುಂಡಿನ ...