ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೇಗೆ ಕೊಲ್ಲುವುದಕ್ಕಾಗುತ್ತದೆ..?

ಇಮೇಜ್
ಅಟ್ಟಹಾಸ ಚೀರಾಟವೆಲ್ಲಾ ಕೆಲವೇ ದಿವಸವಿರಬಹುದು ಇನ್ನೊಂದು ಬ್ರೇಕಿಂಗ್ ನ್ಯೂಸ್ ಸಿಗುವ ತನಕ ಚಾನಲ್‌ನವನ ಪ್ರಧಾನ ವಾರ್ತೆಯಾಗಿರುವುದು ತನಿಖೆ ಪೂರ್ತಿಯಾಗುವ ತನಕ ಪೋಲೀಸರೂ ಓಡಾಡುತ್ತಿರಬಹುದು ದುಃಖ- ನಷ್ಟಗಳೆಲ್ಲಾ ಹೊತ್ತು ಹೆತ್ತ ತಾಯಿಗೆ ಮತ್ತು ಲಾಲಿಸಿ ಬೆಳೆಸಿದ ತಂದೆಗೆ ಮಾತ್ರ ಮತ್ತೆ ನೆನಪುಗಳು ಕೆಲವೊಮ್ಮೆ ಬಸ್ ನಿಲ್ದಾಣದಲ್ಲೋ ಹುತಾತ್ಮ ಸಭಾಂಗಣದಲ್ಲೋ ಸೀಮಿತವಾಗಿರಬಹುದು ಆಗಲೂ, ಬದಕಿನ ಆಸೆ ಮುಗಿಯದ ಮಡದಿ ನಾಲ್ಕು ಗೋಡೆಯೊಳಗೆ ಬಿಕ್ಕಳಿಸಿ ಅಳುತ್ತಿರಬಹುದು ರೆಕ್ಕೆಬಳಿಯದ ಮುಗ್ಧ ಮುಖ ಒಮ್ಮೆಯೂ ಮರಳದ ತಂದೆಗಾಗಿ ದಾರಿ ಕಾಯುತ್ತಿರಬಹುದು ಕೊಲೆಗಾರರು ಆ ಹೊತ್ತಲ್ಲಿ ಮುಂದಿನ ಬೇಟೆ ಹುಡುಕಿ  ಅಲೆಯುತ್ತಿರಬಹುದು. *** ಮೂಲ ಮಲಯಾಳಂ; ಎಬಿ ಕುಟ್ಟಿಯಾನಂ ಕನ್ನಡ; ಹಕೀಂ ಪದಡ್ಕ

ಮಾನವ ಧರ್ಮ (ಕವನ ವಾಚನ) | ಹಕೀಂ ಪದಡ್ಕ

ಇಮೇಜ್
 

ಕೇಸರಿ ಮತ್ತು ಹಸಿರು (ಕವನ ವಾಚನ) | ಹಕೀಂ ಪದಡ್ಕ

ಇಮೇಜ್
 

ಬದುಕಿನ ಕ್ಷಾಮ (ಕವನ) | ಹಕೀಂ ಪದಡ್ಕ

ಇಮೇಜ್
 

ಮೌನ ನಗರಿ (ಕವನ) | ಹಕೀಂ ಪದಡ್ಕ

ಇಮೇಜ್
 

ನನಗೆ ನಗು ಬರುತ್ತಿದೆ (ಕವನ) | ಹಕೀಂ ಪದಡ್ಕ

ಇಮೇಜ್
 

ಸ್ನೇಹ ಮತ್ತು ಯುದ್ಧ (ಕವಿತೆ) | ಹಕೀಂ ಪದಡ್ಕ

ಇಮೇಜ್
 

ಮೊಗ್ಗಲ್ಲೇ ಚಿವುಟಿದಾಗ (ಸಣ್ಣ ಕಥೆ) | ಸಫ್ವಾನ್ ಕೂರತ್

ಇಮೇಜ್
 

ಸುಳ್ಳು; ಸತ್ಯದ ಮೇಲೆ ಲೇಪಿಸಿದ ಪದರ..

ಇಮೇಜ್
ಇ ತ್ತೀಚೆಗೆ 600 ರಷ್ಟು ಡ್ರೋನ್ ತಯಾರಿಸಿದ್ದೇನೆ ಅನ್ನುತ್ತಾ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರತಾಪ್ ಎಂಬ ಹುಡುಗ ಮತ್ತೆ ಚರ್ಚೆಯಾಗುತ್ತಿದ್ದಾನೆ. ಡ್ರೋನ್ ಕಥೆಗಳೆಲ್ಲಾ ಸುಳ್ಳು, ಜನರನ್ನು ಸುಳ್ಳು ದಾಖಲೆ ತೋರಿಸಿ ಯಾಮಾರಿಸಿದ್ದಾನೆ, ಯಾವುದೋ ಪ್ರದರ್ಶನಕ್ಕಿಟ್ಟ ಡ್ರೋನ್ ಗಳ ಪಕ್ಕ ಪೋಟೋ ತೆಗೆಸಿ ಅದನ್ನು ತಾನೇ ನಿರ್ಮಿಸಿದ್ದು ಅನ್ನುತ್ತಾ ಸ್ವಯಂ ವಿಜ್ಞಾನಿಯಾಗಿದ್ದಾನೆಂದು ಹೇಳಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಾದ್ಯಂತ ಟೀಕೆ, ವಿಮರ್ಶೆ, ವ್ಯಂಗ್ಯಕ್ಕೊಳಗಾಗಿ ಚರ್ಚೆಗಳು ವ್ಯಾಪಿಸಿಕೊಂಡಿದೆ. ಅದರಾಚೆಗಿನ ಸತ್ಯ ಏನು ಎನ್ನುವುದು ಅರಿಯೆ. ಆದರೆ, ಒಂದಂತೂ ಅರ್ಥವಾಗಿದ್ದು ಸುಳ್ಳಿಗೆ ಹೆಚ್ಚು ಆಯಸ್ಸು ಇಲ್ಲ ಎಂಬುದು. ಸುಳ್ಳು ಎನ್ನುವುದು ಸತ್ಯವನ್ನು ಮರೆಮಾಚುವ ಅಡ್ಡ ಪರದೆ. ಮನುಷ್ಯ ಸತ್ಯಕ್ಕಿಂತಲೂ ವೇಗವಾಗಿ ಸುಳ್ಳನ್ನು ನಂಬುತ್ತಾನೆ ಯಾಕೆಂದರೆ ಕೇಳಲು, ನೋಡಲು ಆಕರ್ಷಿತವಾಗಿರುವುದು ಸುಳ್ಳೇ. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಸುಳ್ಳಿನ ಮೇಲಿಟ್ಟ ಸತ್ಯವೂ ಕತ್ತಲೆಯಾಗಿರುತ್ತದೆ. ಒಂದರ್ಥದಲ್ಲಿ ಮನುಷ್ಯ ಇವತ್ತು ಬದುಕುತ್ತಿರುವುದೇ ಸುಳ್ಳಿನಿಂದಲೇ ಅನ್ನಬಹುದು. ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲೂ, ಸಂದಿಗ್ಧ ಪರಿಸ್ಥಿತಿಗಳನ್ನು ಸಲೀಸಾಗಿ ಎದುರಿಸಲು ಸುಳ್ಳನ್ನು ಆಯುಧವಾಗಿ ಬಳಸಲಾಗುತ್ತದೆ. ಅದು ಎಷ್ಟು ಪರಿಣಾಮಕಾರಿಯಾಗಿರುತ್ತದೆಯೆಂದರೆ, ಅದೇ ಸತ್ಯವೆಂದು ಬಗೆದು ಅದರ ಹಿಂದೆ ನಡೆದು ಕೊನೆಗೆ ಸತ್ಯ ಕಣ್ಣು ತೆರ...

ನಿದ್ದೆಯಲ್ಲಿ ಮನುಷ್ಯ ತಪ್ಪೇ ಮಾಡಲ್ವಂತೆ..!

ಇಮೇಜ್
ಸು ರುಮ ಹಚ್ಚಿದಂತಿದ್ದ ಆಕೆಯ ಕಣ್ಣು ನೋಡಿ ಸಂತ 'ಯಾಕೆ ನಿದ್ದೆಯಿಲ್ಲವೇ' ಅಂತ ಕೇಳುತ್ತಾನೆ. ಆಕೆ ಅವಳದೇ ಮೌನ ಭಾಷೆಯಲ್ಲಿ ಹೌದು ಅಂದಾಗ ಸಂತ; “ನಿದ್ರಿಸಬೇಕು, ಚೆನ್ನಾಗಿ ನಿದ್ರಿಸಬೇಕು.., ನಿದ್ದೆಯಲ್ಲಿ ಭಗವಂತ ಮಾತ್ರ ಜೊತೆಗಿರುತ್ತಾನೆ, ಅದೇ ಈ ಉಸಿರು. ಗೊರಕೆ ಹೊಡೆಯುವವರ ಮೂಗಿನ ತುದಿಯಲ್ಲಿ ಪಿಶಾಚಿ ಇರುತ್ತದೆಯಂತೆ, ಆದರೆ ಈ ಪಿಶಾಚಿ, ಜಿನ್ನ್ ಎಲ್ಲ ಮನುಷ್ಯ ಎಚ್ಚರದಲ್ಲಿರುವಾಗಲಷ್ಟೇ ನಮ್ಮ ತಲೆಗೆ ಹತ್ತಿ ಕೂರುವುದು. ನಿದ್ದೆಯಲ್ಲಿ ಜಾತಿ-ಧರ್ಮ, ದ್ವೇಷ, ದುಃಖ ಯಾವುದೂ ಇಲ್ಲ, ಬರೀ ಸೃಷ್ಟಿಕರ್ತ ಮಾತ್ರ..” ಎನ್ನುತ್ತಾನೆ. ಇದು ಸೂಫಿಯುಂ ಸುಜಾದಯುಂ ಎಂಬ ಮಲಯಾಳಂ ಸಿನೆಮಾದಲ್ಲಿನ ಒಂದು ತುಣುಕು.  ಮನುಷ್ಯ ಮನಸ್ಸಿನ ತೃಪ್ತಿಗಾಗಿ ಅಲೆಯುತ್ತಾನೆ. ಸಂಕಟ, ದುಃಖ, ಸಂಕಷ್ಟ, ಸಮಸ್ಯೆ ಯಾವುದೂ ಇರಬಾರದೆಂದೂ ಬದಲು ಸಂತೋಷದಿಂದಲೇ ಕೂಡಿರಬೇಕೆಂಬ ವ್ಯಾಮೋಹದಲ್ಲಿರುತ್ತಾನೆ‌. ಆದರೆ, ಬಹುತೇಕ ಮನುಷ್ಯರಿಗೆ ಇದು ಸಾಧ್ಯವಾಗುವುದೇ ಇಲ್ಲ. ದಿನಕ್ಕೊಂದರಂತೆ ಸಮಸ್ಯೆಗಳು, ಕಾಡುವ ನೆನಪುಗಳು, ನೆರವೇರದ ಆಸೆಗಳು, ಕೆಲವೊಮ್ಮೆ ಸಾವಿನ ಭಯ..‌ಹೀಗೆ ನಾನಾರೀತಿಯಲ್ಲಿ ಮನುಷ್ಯನ ಮನಸ್ಸು ಚಂಚಲವಾಗುತ್ತಲೇ ಇರುತ್ತದೆ‌. ಹಗಲು ಹೊತ್ತಿನಲ್ಲಿ ತನ್ನ ಕಾಯಕದಲ್ಲಿ ಮಗ್ನನಾಗಿರುವುದರಿಂದ ಸಮಸ್ಯೆಗಳೆಲ್ಲ ಮನಸ್ಸನ್ನು ಹೊಂಚು ಹಾಕುವುದು ರಾತ್ರಿ ಪಾಳಿನಲ್ಲಿ. ನಿದ್ದೆ ಸುಳಿಯದ ರಾತ್ರಿಯಲ್ಲಿ ನಾವು ನೆನಪಿಸಬಾರದ್ದನ್ನೆಲ್ಲ ನೆನಪಿಸಿಕೊಳ್ಳುತ್...

ಪಂಜರದ ಗಿಣಿಗೆ ಸ್ವಾತಂತ್ರ್ಯವೆಲ್ಲಿ..??

ಇಮೇಜ್
ಪಂ ಜರದೊಳಗೆ ಬಂಧಿಸಲ್ಪಟ್ಟ ಗಿಣಿಯೊಂದು ಸ್ವಚ್ಛಂದವಾಗಿ ಹಾರುವುದನ್ನು ಬಯಸುತ್ತದೆ. ನಿರ್ಭಯದಿಂದ, ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ಬದುಕುವ ಕನಸು ಕಟ್ಟಿರುತ್ತದೆ. ಆದರೆ, ಅದರ ಯಜಮಾನನ ಸ್ವಾರ್ಥತೆಗೆ ತನ್ನ ಜಗತ್ತನ್ನು ಸಂಕುಚಿಗೊಳಿಸಬೇಕಾದ ಅನಿವಾರ್ಯತೆಗೆ ಬಂದಿರುತ್ತದೆ. ಪಕ್ಷಿ ಪ್ರೇಮಿ ಎನ್ನುತ್ತಲೇ ಒಬ್ಬಾತ ಪಕ್ಷಿಯನ್ನು ಪಂಜರದೊಳಗಿಡುವುದು ತಮಾಷೆ. ಆ ಗಿಣಿಗೆ ತನ್ನದೇ ಆದ ಸ್ವಾತಂತ್ರ್ಯವಿತ್ತು, ಬಾನೆತ್ತರದಲ್ಲಿ ಹಾರಾಡಿ ಜಗತ್ತು ಸುತ್ತುವ ಅವಕಾಶವಿತ್ತು. ತನ್ನ ಸಹಚರರ ಜೊತೆ ಬೆರೆತು ಬದುಕುವ ಸುಂದರ ವಾತಾವರಣವನ್ನು ಕಳೆದುಕೊಂಡು ಸಂಕುಚಿತ ಬದುಕಿನಲ್ಲೇ ಕಾಲವಾಗುತ್ತದೆ. ಭಾರತ 73 ನೇ ಸ್ವತಂತ್ರದಿನದ ಸಂಭ್ರಮದಲ್ಲಿದೆ. ಬಿಳಿಯರಿಂದ ಆಕ್ರಮಿಸಲ್ಪಟ್ಟ ಪ್ರಬುದ್ಧ ಭಾರತವನ್ನು ಮರಳಿ ಪಡೆದ ಸಂಭ್ರಮ. ಇಲ್ಲಿ ಹೋರಾಡಿದವರು, ಜೀವತ್ಯಾಗ ಮಾಡಿದ ಮಹಾನರು, ಸಿಪಾಯಿಗಳು ಎಲ್ಲರನ್ನೂ ನೆನಪಿಸುತ್ತಲೇ ಆಗಸ್ಟ್ 15 ಮುಗಿದುಹೋಗುತ್ತದೆ. ವ್ಯಾಪಾರದ ನೆಪದಲ್ಲಿ ಕಡಲು ದಾಟಿ ಬಂದ ಬ್ರಿಟಿಷರು ಇಲ್ಲಿನ ದೌರ್ಬಲ್ಯವನ್ನರಿತು ಹೂಡಿದ ತಂತ್ರದಿಂದ ಇಡೀ ಭಾರತವನ್ನು ತನ್ನ ತೆಕ್ಕೆಗೆಳೆದುಕೊಂಡಾಗ ಇಲ್ಲಿನ ಮೂಲ ನಿವಾಸಿಗಳು ಗುಲಾಮರಾಗಬೇಕಾಯಿತು. ಸಂಪದ್ಭರಿತ ಸುಂದರ ಭಾರತದ ಬೊಕ್ಕಸ ಕೊಳ್ಳೆಹೊಡೆದು ದೇಶವನ್ನು ಬಡತನಕ್ಕೆ ತಳ್ಳಿದ್ದು, ಇದರ ವಿರುದ್ಧ ಮಾತೆತ್ತಿದ ಪ್ರಜ್ಞಾವಂತರ ಮುಂದೆ ತುಪಾಕಿಯ ಗುರಿಯಿಟ್ಟಿದ್ದು, ಬಿಳಿಯರ ಗುಲಾಮರಾಗಿದ್ದುಕೊಂಡು...

ನೆಟ್ವರ್ಕ್ ಮಾರ್ಕೆಟಿಂಗ್; ನಾವು ಮೋಸ ಹೋಗುತ್ತಿದ್ದೇವೆ..!?

ಇಮೇಜ್
ಮ ನುಷ್ಯ ಇವತ್ತು ಹಣದ ಹಿಂದೆ ಓಡುತ್ತಿದ್ದಾನೆ. ಸುಲಭದಲ್ಲಿ ಹಣ ಸಂಪಾದಿಸುವುದು, ಬಲುಬೇಗನೆ ಶ್ರೀಮಂತನಾಗುವ ಕನಸನ್ನು ಎಲ್ಲರೂ ಕಟ್ಟಿಕೊಂಡಿರುತ್ತಾರೆ. ಅದಕ್ಕಾಗಿ ಅಡ್ಡಾದಿಡ್ಡಿ ಓಡಾಡುತ್ತಾ, ಹಣದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮನುಷ್ಯ ತನ್ನ ಕೈಯಲ್ಲಿ ಒಂದಿಷ್ಟು ಹಣ ಬಂದಾಗ ಲೋಕವನ್ನೇ ಮರೆತು ಬೀಗುತ್ತಾನೆ. ಅಹಂಕಾರದ ದಿವಾಳಿಯಾಗಿ, ನಡೆದು ಬಂದ ದಾರಿಯನ್ನೂ ಮರೆತು ಕೆಲವೊಮ್ಮೆ ಬದುಕಿನ ಕ್ಷಣಿಕ ಸುಖಗಳಿಗೆ ಮಾರುಹೋಗುತ್ತಾನೆ. ಬದುಕಲು ಹಣ ಅಗತ್ಯ, ಆದರೆ ಹಣ ಸಂಪಾದಿಸಲೆಂದೇ ಬದುಕಬಾರದು. ಸಂಪಾದನೆಯ ಜೊತೆಗೆ ಸನ್ಮನಸ್ಸನ್ನು ಬೆಳೆಸಿಕೊಂಡು, ಕೈಲಾಗದವರಿಗೆ ನಮ್ಮಿಂದಾಗುವ ಸಹಾಯ, ಸಹಕಾರ ನೀಡುವ ಮೂಲಕ ಜೀವನ ಅರ್ಥಪೂರ್ಣವಾಗಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಇಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಅದಲ್ಲ, ಕಳೆದ ವರ್ಷ ಅಂದರೆ 2019 ರ ಸೆಪ್ಟೆಂಬರ್ ನಲ್ಲಿ ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಶುಕೂರ್ ಎಂಬ 35 ವರ್ಷ ಪ್ರಾಯದ ಯುವಕನೊಬ್ಬನ ಹತ್ಯೆಯಾಗುತ್ತದೆ. ಆತನನ್ನು ಕೊಲೆಗೈದಿದ್ದು ಆತನ ಸ್ನೇಹಿತರೇ ಆಗಿತ್ತು. ಪೋಲೀಸರು ಇದರ ಹಿಂದೆ ತನಿಖೆ ನಡೆಸಿದಾಗ ಬೆಳಕಿಗೆ ಬಂದ ಬೆಚ್ಚಿಬೀಳಿಸುವ ಸುದ್ದಿಯೆಂದರೆ, ಶುಕೂರ್ ಮತ್ತು ಆತನ ತಂಡ ಗೆಳೆಯರನ್ನೂ ಸೇರಿಸಿ, ಇಡೀ ಜಿಲ್ಲೆಯಿಂದ ಸುಮಾರು 450 ಕೋಟಿಯಷ್ಟು ಹಣವನ್ನು ಕಬಳಿಸಿದ್ದಾನೆ ಅನ್ನುವುದಾಗಿತ್ತು. Bitcoin ಹೆಸರಿನಲ್ಲಿ ದಂಧೆ ನಡೆಸಿ, ಜನರನ್ನು ಮೋಸದ ಜಾಲಕ್ಕೆ ಬಲಿಯಾಗಿಸಿ ಹಣ ದೋಚಿದ...

ಊರ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರು..

ಇಮೇಜ್
ಸ ರಿ-ತಪ್ಪುಗಳಾಚೆಗೆ ವಿಮರ್ಶೆಯೆತ್ತಿಕೊಂಡಾಗ ಸಾಮಾನ್ಯವಾಗಿ ಜನರು ತಮ್ಮ ನಿಲುವಿನಲ್ಲೇ ಸಮರ್ಥನೆ ಮಾಡಿಕೊಳ್ಳುತ್ತಾರೆ ವಿನಃ ಸತ್ಯ ಮತ್ತು ನ್ಯಾಯದ ಕುರಿತಾಗಿ ಹೆಚ್ಚಿನವರು ಯೋಚಿಸಲಾರರು. ತಪ್ಪುಗಳನ್ನು ಒಪ್ಪಿಕೊಂಡು ಅದರ ಮೂಲಕ ಸರಿದಾರಿಯಲ್ಲಿ ಬಿದ್ದಿರುವ ಕಲ್ಲುಮುಳ್ಳು ಬದಿಗೆ ಸರಿಸಿ ಮುನ್ನಡೆಯುವ ಮನಸ್ಸಿದ್ದರೆ ಮನುಷ್ಯ ಪರಿಪೂರ್ಣನಾಗುತ್ತಾನೆ. ವಾಸ್ತವದಲ್ಲಿ ಇಲ್ಲಿ ಪರಿಪೂರ್ಣರು ಯಾರೂ ಇಲ್ಲ. ಮಾಡುವ ಪ್ರತಿಯೊಂದು ಕಾರ್ಯದಲ್ಲೂ ತಪ್ಪುಗಳಿರುತ್ತವೆ, ಕೆಲವೊಮ್ಮೆ ಸಂದರ್ಭಕ್ಕನುಗುಣವಾಗಿ ಆ ಕ್ಷಣಕ್ಕೆ ತಪ್ಪು ಸರಿಯಾಗಲೂಬಹುದು. ಹೇಳಿ ಬರುತ್ತಿರುವುದು ಮೊನ್ನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ. ಪ್ರವಾದಿ ನಿಂದನೆಯ ಕಾರಣಕ್ಕೆ ಜನ ಆಕ್ರೋಶಗೊಂಡು ಅತಿರೇಕದ ವರ್ತನೆ ಮಾಡಿದ್ದಾರೆ ಎನ್ನುವುದಷ್ಟೇ ಸುದ್ದಿಯಾಯಿತು. ಗಲಭೆ ಬುಗಿಲೆದ್ದು ಮೂರು ಅಮಾಯಕ ಯುವಕರ ಪ್ರಾಣಕ್ಕೂ ಕುತ್ತು ತಂದಿತ್ತು. ನೂರಾರು ಮಂದಿ ಕತ್ತಲು ತುಂಬಿದ ಕಂಬಿಕೋಣೆಯಲ್ಲಿ ಬಂಧಿಸಲ್ಪಟ್ಟರು. ಪ್ರಕರಣದ ಪೂರ್ಣ ಹೊಣೆಯನ್ನು ನಿರ್ದಿಷ್ಟ ಪಕ್ಷವೊಂದಕ್ಕೆ, ಧರ್ಮವೊಂದಕ್ಕೆ ಎತ್ತಿಕಟ್ಟಿ ಮಾಧ್ಯಮಗಳು ಮತ್ತು ರಾಜಕಾರಣಿಗಳು ಉರಿಯುತ್ತಿರುವ ಬೆಂಕಿಯಲ್ಲಿ ಚಳಿಕಾಯಿಸಿಕೊಂಡಾಗ ಸಾಥ್ ನೀಡಿದ್ದು ಸಾಮಾಜಿಕ  ಪ್ರಗತಿಪರರೆನಿಸಿಕೊಂಡವರಲ್ಲಿ ಕೆಲವರು. ರಾಜಕೀಯದಲ್ಲಿ ಇದು ಸಹಜವೇ. ಸಾವಿನಲ್ಲೇ ಅವರು ಬದುಕುತ್ತಿದ್ದಾರೆ. ಮಾಧ್ಯಮಗಳೂ ಅವರ ಎಂಜಲಿನಲ್ಲೇ ಹೊ...

ನೆಟ್ವರ್ಕ್ ಮಾರ್ಕೆಟಿಂಗ್; ಮರು ಅವಲೋಕನ

ಇಮೇಜ್
ಕ ಳೆದ ವಾರದ 'ನೆಟ್ವರ್ಕ್ ಮಾರ್ಕೆಟಿಂಗ್; ನಾವು ಮೋಸ ಹೋಗುತ್ತಿದ್ದೇವೆ' ಎನ್ನುವ ಬರಹವು ಸಣ್ಣ ಮಟ್ಟಿನಲ್ಲಿ ಚರ್ಚೆಗೀಡಾಗಿಸಿದೆ. ಓದಿದವರ ಪೈಕಿ ಬಹುತೇಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಕೂಡ, ಕೆಲವು ಮಂದಿ ನಾನು ಬರೆದ ವಿಚಾರ ಸರಿಯಿಲ್ಲ, ನೆಟ್ವರ್ಕ್ ಮಾರ್ಕೆಟಿಂಗ್ ನಿಂದ ಮೋಸ ಹೋಗುವಂತದ್ದೇನೂ ಇಲ್ಲ ಎಂಬ ವಾದವನ್ನಿಟ್ಟಿದ್ದರು. ಹಾಗಾಗಿ ಮತ್ತೊಮ್ಮೆ ಈ ವಿಷಯದ ಬಗ್ಗೆ ಇಣುಕಿ ನೋಡಬೇಕಾಯ್ತು. Network Marketing ಎಂಬುವುದು ಗ್ರಾಹಕರಿಗೆ ಉತ್ಪನ್ನಗಳನ್ನು ನೇರವಾಗಿ ಮಾರಾಟಮಾಡುವುದು, ಅಂದರೆ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ಉತ್ಪಾದನೆಯ ಕಂಪನಿಯಿಂದ ಬೇಡಿಕೆದಾರರಿಗೆ ಮಾರುವ ಪ್ರಕ್ರಿಯೆ. ಇದನ್ನು Multi Level Marketing, Refferal Marketing, Direct Selling, Social Selling ಎಂಬಿತ್ಯಾದಿ ಹೆಸರಿನಲ್ಲಿ ಕರೆಯಲಾಗುತ್ತದೆ. ಆದರೆ, ನಾನು ಕಳೆದ ಲೇಖನದಲ್ಲಿ ಪ್ರಸ್ತಾಪಿಸಿದ ವಿಚಾರ ಇದೇ ಹೆಸರಿನಲ್ಲಿ ಈಗ ನಡೆಯುತ್ತಿರುವ ದಂಧೆಯ ಕುರಿತು. ಅಂದರೆ, ಇಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ‌, ವಸ್ತುಗಳ ಮಾರಾಟವೂ ಆಗುವುದಿಲ್ಲ, ಬದಲಾಗಿ ಒಂದು ಮೊತ್ತವನ್ನು ನಿಕ್ಷೇಪಿಸಿ ಅದರಿಂದ ಪ್ರತಿದಿನ/ವಾರ/ತಿಂಗಳಿಗೆ ಯಾವುದೇ ದುಡಿಮೆಯಿಲ್ಲದೆ ಲಾಭ ಗಳಿಸುವ ಪ್ರಕ್ರಿಯೆ. ಒಂದರ್ಥದಲ್ಲಿ Pyramid Scheme. ಇದನ್ನು ಕೂಡ MLM ಪ್ರಬೇಧದಡಿಯಲ್ಲೇ ಗುರುತಿಸಲಾಗುತ್ತಿದೆ. Multi level marketing ಅಥವಾ n...

ಸ್ಮೈಲ್ ಪ್ಲೀಸ್..

ಇಮೇಜ್
ಕೊ ರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಡೀ ವಿಶ್ವದಲ್ಲಿ ಭಾರತ ಮೊದಲಿಗೆ ಬಂದು ನಿಂತಿದೆ. ಹದಗೆಟ್ಟ ದೇಶದ ಆರ್ಥಿಕತೆ, ಕಂಗೆಟ್ಟ ಜನಸಾಮಾನ್ಯರು, ಉದ್ಯೋಗವಿಲ್ಲದ ಪರಿಸ್ಥಿತಿ, ವಾಣಿಜ್ಯ ಕ್ಷೇತ್ರಗಳೆಲ್ಲ ಪಾತಾಳಕ್ಕಿಲಿಯುತ್ತಿದ್ದರೂ, ಯಜಮಾನನಿಗೆ ಫೋಟೋಶೂಟ್ ಚಿಂತೆ. ನವಿಲಿಗೆ ಕಾಳು ಹಾಕುವುದು, ಒಂದೇ ಬಾರಿ ಎರಡು ಇಂಗ್ಲಿಷ್ ಪುಸ್ತಕ, ಪತ್ರಿಕೆ ಓದುವುದರ ಜೊತೆಗೆ ಲ್ಯಾಪ್‌ಟಾಪ್‌ ಲ್ಲೂ ಕೆಲಸ ಮಾಡುವ ಭಂಗಿ, ಬಾತುಕೋಳಿಗಳ ಜೊತೆ ಮಾತುಕತೆ, ಗಿಟಾರ್ ಹಿಡಿದು ಆಕಾಶ ನೋಡುವ ಹೊಸ ಪೋಸು.... ಹೀಗೆ ವಿಧವಿಧ ಶೈಲಿಯಲ್ಲಿ ಯಜಮಾನನ ಫೋಟೋಗಳು ದಿನೇದಿನೇ ಬರುತ್ತಿರುವುದು ವಿಶೇಷ. 'ಸರ್ವಾಧಿಕಾರಿಗಳೆಲ್ಲರೂ ಶೋಕಿ ಮಾಡುವವರಂತೆ.' ಎಲ್ಲೋ ಕೇಳಿದ ನೆನಪು. ಈಗ ನಮ್ಮ ಯಜಮಾನನ ಶೋಕಿ ಕಾಣುವಾಗ ಈ ಮಾತು ಸುಳ್ಳು ಅನ್ನುವಂತೆಯೂ ಇಲ್ಲ, ನಮ್ಮ ಪ್ರಭು ಸರ್ವಾಧಿಕಾರಿಯಲ್ಲ ಅಂತ ಒಂದೇ ನೋಟಕ್ಕೆ ಹೇಳುವಂತೆಯೂ ಇಲ್ಲ. ದೇಶದ ಪರಿಸ್ಥಿತಿ ಬಿಗಡಾಯಿಸಿದ್ದರೂ ಕೂಡ, ಆ ಕಡೆಗೆ ಕಿಂಚಿತ್ತೂ ಗಮನ ಕೊಡದೇ ಆಡಂಬರ ಬದುಕಿನಲ್ಲೇ ಮಾರು ಹೋಗಿರುವ ರಾಜ ಭಾರತವನ್ನು ಎಲ್ಲಿತನಕ ಹಾಯಿಸುತ್ತಾರೆಂಬುದು ಪ್ರಶ್ನಾರ್ಥಕ..? ಹಸಿವು, ರೋಗ, ಬಡತನ, ಪ್ರಾಕೃತಿಕ ವಿಕೋಪಗಳಿಂದೆಲ್ಲಾ ದೇಶದ ಜನತೆ ಬಹಳಷ್ಟು ನೊಂದುಕೊಂಡಿದ್ದರೂ, ಸೂರಿಲ್ಲದೆ, ಅನ್ನವಿಲ್ಲದೆ ಅಲೆದಾಡುತ್ತಿರುವ ಸನ್ನಿವೇಶವಿದ್ದರೂ, ಉದ್ಯೋಗವಿಲ್ಲದೆ ಯುವಜನತೆ ಪರದಾಡುವ ಪರಿಸ್ಥಿತಿಯಲ್ಲೂ, ಜಾತಿ-ಧರ್...

ಗಾಂಜಾ ತುಳಸಿಯಾದ ಕಥೆ..!!

ಇಮೇಜ್
“ನಾರ್ಕೋಟಿಕ್ಸ್ ಈಸ್ ಎ ಡರ್ಟೀ ಬಿಸ್ನಸ್ (Narcotics is a dirty business)” ಮಲಯಾಳಂ ನ 'ಲೂಸಿಫರ್' ಎಂಬ ಸಿನೆಮಾದಲ್ಲಿ ತೂಕದ ಮಾತೊಂದಾಗಿತ್ತು ಇದು. ಅಲ್ಲಿ ಡ್ರಗ್ ಮಾಫಿಯಾ ದಂಧೆಯಾಗುವ ರೀತಿಯನ್ನು, ಅದರ ಹಿಂದೆ ಕಾಣದ ಕೈಗಳಾಗಿರುವ ರಾಜಕಾರಣಿಗಳು, ಕಾರ್ಪೊರೇಟರ್ ಗಳ ಪಾತ್ರದ ಚಿತ್ರಣವನ್ನು ನೀಡಲಾಗಿತ್ತು. ಸಮಾಜಕ್ಕೆ ಇನ್ನೂ ಸಮಸ್ಯೆಯಾಗಿರುವ ಮಾದಕ ದ್ರವ್ಯದ ಪಿಡುಗುಗಳ ಹಿಂದೆ ನಿಗೂಢವಾದ ಒಂದು ಮಾಯಾಜಾಲವೇ ಅಡಗಿದೆ ಎಂಬ ವಿಚಾರ ಸ್ಪಷ್ಟ. ಹಾಗಾಗಿಯೇ ಲೂಸಿಫರ್' ಲ್ಲಿ 'ಮಾದಕ ವಸ್ತು ಒಂದು ಕೊಳಕು ವ್ಯವಹಾರ' ಎಂಬ ಮಾತು ಗಟ್ಟಿಧ್ವನಿಯಾಗಿದ್ದು. ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ ಈ ಒಂದು ಮಾತು ಮನಸ್ಸಿನೊಳಗೆ ಓಡಾಡುತ್ತಿತ್ತು. ತೆರೆಯಲ್ಲಿ ಕಾಣುವ ಸಿನೆಮಾ ಎಂಬ ಅದ್ಭುತದ ಮರೆಯಲ್ಲಿ ವ್ಯತಿರಿಕ್ತವಾದ ಲೋಕವೊಂದಿದೆ. ಚಿತ್ರರಂಗದಲ್ಲಿ ಮಾದಕ ವಸ್ತುಗಳ ವ್ಯವಹಾರದ ಕುರಿತು ಸದ್ದು ಕೇಳಿಸುವುದು ಇದೇನೂ ಮೊದಲಲ್ಲ. ಈ ಹಿಂದೆ ಮಲಯಾಳಂ ಫಿಲಂ ಇಂಡಸ್ಟ್ರಿ ಯಲ್ಲೂ ಇದೇ ರೀತಿಯ ಒಂದು ಚರ್ಚೆ ತಲೆಯೆತ್ತಿಕೊಂಡಿತ್ತು. ಯುವ ನಟ ಶೇನ್ ನಿಗಮ್ ವಿಚಾರವಾಗಿ ಆರಂಭಗೊಂಡು ಡ್ರಗ್ಸ್ ಜಾಲದ ಕುರಿತಾಗಿ ಮಾತುಗಳಾಗಿದ್ದರೂ ಕೂಡ ಅಷ್ಟೇ ವೇಗದಲ್ಲಿ ಆ ಧ್ವನಿ ಮೌನವಾಗಿ ಹೋಗಿತ್ತು. ಹೆಚ್ಚಾಗಿ ಈ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವುದು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪ್ರಖ್ಯಾತ ಉದ್ಯಮಿಗಳೇ ...