ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತ ವಿಶ್ವಗುರುವಾಗುತ್ತಿದೆ..!!

ಇಮೇಜ್
ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ದೇಶ ಉನ್ನತಿಗೇರಬೇಕು ಎಂಬ ಕನಸಿದೆ. ಸಂಪ್ರದಾಯ, ಸಂಸ್ಕೃತಿ, ವೈವಿಧ್ಯತೆಗಳಿಂದ ಭಾರತ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ತಲೆಯೆತ್ತಿ ನೋಡಬೇಕು, ನಮ್ಮ ದೇಶದ ಖ್ಯಾತಿ ಜಗತ್ತಿನುದ್ದಗಲಕ್ಕೆ ವ್ಯಾಪಿಸಿ ಇದು ಸುಸಂಕೃತ, ಸಂಪದ್ಭರಿತ ಮತ್ತು ಸಾಹೋದರ್ಯದಿಂದ ಮನ್ನಣೆ ಗಳಿಸಿ ಜಗತ್ತಿನ ಗುರುವಾಗಬೇಕು ಎಂಬ ಮೋಹ ನಮಗಿದೆ. 'ವಿಶ್ವಗುರು' ಎಂಬ ಪರಿಕಲ್ಪನೆಯಡಿಯಲ್ಲಿ ವರ್ಷಗಳ ಹಿಂದೆ ಚಕ್ರವರ್ತಿ ಸೂಲಿಬೆಲೆಯವರು ಒಂದು ಭಾಷಣದಲ್ಲಿ '2017 ಕ್ಕೆ ಭಾರತ ವಿಶ್ವಗುರುವಾಗುತ್ತದೆ' ಎಂದು ಹೇಳಿದ್ದರು. ಅದನ್ನೇ ಮಾನದಂಡವಾಗಿಸಿಕೊಂಡು ಒಂದು ಬಣ ಈಗಾಗಲೇ ಭಾರತ ವಿಶ್ವಗುರುವಾಗಿದೆ ಎಂಬ ವಾದದೊಂದಿಗೆ, ನರೇಂದ್ರ ಮೋದಿಯವರು ಪ್ರಧಾನಿಯಾದ ಕಾರಣದಿಂದ ಇದು ಸಾಧ್ಯವಾಯಿತು ಎಂಬ ತರ್ಕವನಿಟ್ಟಿದ್ದಾರೆ. ಅವರ ಪ್ರಕಾರ ಇವತ್ತು ಭಾರತ ಜಗತ್ತಿನ ಗುರು, ಪ್ರತಿಯೊಂದರಲ್ಲೂ ಭಾರತ ಮೇಲುಗೈ, ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತವನ್ನು ಮಾದರಿಯಾಗಿಸಿಕೊಂಡಿದೆಯಂತೆ. ಇದಕ್ಕೆ ಪೂರಕವೆಂಬಂತೆ ನಕಲಿ ಸಾಧನೆಗಳ ಪಟ್ಟಿಯೊಂದಿಗೆ ಅವರು ಮುಂದೆ ಬರುತ್ತಿದ್ದಾರೆ. ವಿಶ್ವಗುರು ಆಗಬೇಕಾದರೆ ಇರಬೇಕಾದ ಕನಿಷ್ಠ ಮಾನದಂಡವೇನು ಎಂಬುದರ ಬಗ್ಗೆಯೂ ಅರಿವಿಲ್ಲದೆ ಭಾರತದ ಮೇಲಿನ ಪ್ರೀತಿ ಎಂಬ ಪರದೆಯಡಿಯಲ್ಲಿ ನರೇಂದ್ರ ಮೋದಿಯನ್ನು ಪೂಜಿಸುವ ಪರಿಯಿಂದಾಗಿ ಸರಕಾರದ ವೈಫಲ್ಯತೆಗಳು ಮತ್ತ...

ಕೊರೋನಾ; ಜನರು ಮೋಸ ಹೋಗುತ್ತಿದ್ದಾರೆ..

ಇಮೇಜ್
ಕಳೆದ ಕೆಲವು ತಿಂಗಳುಗಳಿಂದ ಜಗತ್ತನ್ನು ತಲ್ಲಣಗೊಳಿಸಿದ ಕೊರೋನಾ ವೈರಸ್ ನ ಅಟ್ಟಹಾಸ ನಮ್ಮ ಭಾರತದಲ್ಲಿ ಈಗೀಗ ತೀವ್ರಗೊಳ್ಳುತ್ತಿದೆ. ಸುಮಾರು ಎಂಟೂವರೆ ಲಕ್ಷದಷ್ಟು ಮಂದಿಗೆ ಸೋಂಕು ಅಂಟಿಕೊಂಡಿದ್ದು, ಐದು ಲಕ್ಷದಷ್ಟು ಜನರು ಗುಣಮುಖರಾಗಿದ್ದಾರೆ ಜೊತೆಗೆ ಈ ತನಕ 22,674 ಮಂದಿ ಸೋಂಕಿನಿಂದಾಗಿ ಮರಣವನ್ನಪ್ಪಿದ್ದಾರೆ‌ ಎಂಬ ಮಾಹಿತಿಯಿದೆ. ಕೋವಿಡ್-೧೯ ಮೊದಮೊದಲು ಚೀನಾ, ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಹೆಚ್ಚಾಗಿ ಭೀತಿ ಹುಟ್ಟಿಸಿದ್ದರೂ, ಬಹುತೇಕ ರಾಷ್ಟ್ರಗಳು ಇದನ್ನು ತಕ್ಕಮಟ್ಟಿಗೆ ಮೆಟ್ಟಿನಿಲ್ಲುವಲ್ಲಿ ಸಫಲವಾಗಿದೆ. ಆದರೆ ಭಾರತ ಅತಂತ್ರ ಸ್ಥಿತಿಯತ್ತ ಮುನ್ನುಗ್ಗುತ್ತಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಕೊರೋನಾ ಸೋಂಕಿತ ಮೂರನೇ ರಾಷ್ಟ್ರವಾಗಿ ಭಾರತ ಮುಂದುವರಿಯುತ್ತಿದೆ.  ದೇಶದಲ್ಲಿ 500-1000 ಸೋಂಕು ಪ್ರಕರಣ ಕಂಡುಬಂದಾಗ ಸಂಪೂರ್ಣ ಲಾಕ್ಡೌನ್ ಹೇರುವ ಮೂಲಕ ವೈರಸ್ ನಿಯಂತ್ರಣಕ್ಕೆ ಶ್ರಮಿಸಲಾಗಿತ್ತು. ಆದರೆ, ಕ್ರಮೇಣ ಪ್ರಕರಣಗಳು ಹೆಚ್ಚುತ್ತಿದ್ದಂತೆ ನಿಯಂತ್ರಣಗಳನ್ನು ಸಡಿಲಗೊಳಿಸಿದ್ದೇ ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಕಾರಣವಾಗಿದೆ ಎಂಬುದು ಸತ್ಯ ಸಂಗತಿ. ಕೊರೋನಾ ವಿರುದ್ಧದ ಸಮರಕ್ಕೆ ಪ್ರಾರಂಭದಲ್ಲಿ ಕಂಡುಬಂದ ಮುನ್ನೆಚ್ಚರಿಕೆಗಳು ಸಂಖ್ಯೆ ಏರುತ್ತಿದ್ದಂತೆ ಕಡಿಮೆಯಾಗತೊಡಗಿದೆ. ದೇಶದಲ್ಲಿ ಸೋಂಕು ಈಗಲೂ ಬಹಳ ವ್ಯಾಪಕವಾಗಿ ಹರಡುತ್ತಿದ್ದು, ಇನ್ನೂ ದೊಡ್ಡ ಮಟ್ಟದಲ್ಲಿ ತೊಂದರೆಯನ್ನುಂಟು ಮಾಡಬಹುದೋ ಎಂಬ...

ಲಡಾಖ್ ಭೇಟಿ; ಒಂದು ಪ್ರಹಸನ

ಇಮೇಜ್
ಅದೊಂದು ವಿಶಾಲವಾದ ಕೋಣೆ. ಆಗಷ್ಟೇ ತರಿಸಿದ್ದ ಹತ್ತಿಪ್ಪತ್ತು ಹೊಸ ಮಂಚಗಳಲ್ಲಿ ಸ್ಟಿಕರ್ ಕೂಡ ಕಿತ್ತು ಹೋಗಿರದ ಬೆಡ್ ಮೇಲೆ ಹಾಸಲಾಗಿದ್ದ ಹೊದಿಕೆ. ನಮ್ಮ ಕಥಾ ನಾಯಕ ಬರುವ ಹೊತ್ತಿಗೆ ಒಂದಷ್ಟು ಮಂದಿ ಅದನ್ನೇರಿ ಒಂದೇ ಭಂಗಿಯಲ್ಲಿ ಕುಳಿತು ಸ್ವಲ್ಪ ಹೊತ್ತಿಗೆ ಗಾಯಾಳುಗಳಾಗುತ್ತಾರೆ. ಗಾಯದ ಸಣ್ಣ ಚುಕ್ಕೆಯೂ ಅಲ್ಲಿ ಕಂಡುಬರಲಿಲ್ಲ. ಅವರು ಹೇಳುವಂತೆ ಅದೊಂದು ಚಿಕಿತ್ಸಾ ಕೊಠಡಿ. ಪ್ರಾಜೆಕ್ಟರ್ ಮತ್ತು ಸ್ಕ್ರೀನ್ ಬೋರ್ಡ್ ಅಳವಡಿಸಲಾಗಿರುವ ವಿನೂತನ ಶೈಲಿಯ ಚಿಕಿತ್ಸಾ ಕೊಠಡಿ... ಅಲ್ಲಿ ಔಷಧಿಗಳನ್ನಿಡುವುದಕ್ಕಾಗಿ ಟೇಬಲ್ ಗಳಿರಲಿಲ್ಲ, ಗ್ಲುಕೋಸ್ ಸ್ಟಾಂಡ್ ಇರಲಿಲ್ಲ, ನೀರಿನ ಬಾಟಲಿಗಳಿರಲಿಲ್ಲ.. ಅಷ್ಟೇ ಯಾಕೆ ಒಬ್ಬನೇ ಒಬ್ಬ ಡಾಕ್ಟರ್ ಕೂಡ ಅಲ್ಲಿ ಕಾಣಲು ಸಿಗಲಿಲ್ಲ. ಹಾಗಂತ ಅವರಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಅಂತ ಕೇಳಿದರೆ, ಪ್ರಬುದ್ಧವಾದ ಉತ್ತರವೊಂದಿದೆ, ಆಧುನಿಕ ತಂತ್ರಜ್ಞಾನ ಬಳಸಿ ಗಾಯಾಳುಗಳಿಗೆ ಪ್ರಾಜೆಕ್ಟರ್ ಸಹಾಯದಿಂದ ಪಾಠ ಹೇಳಿಕೊಡುವ ಮೂಲಕ ಎಂದು. ಇದೆಲ್ಲವೂ ನಮ್ಮ ಭಾರತದಲ್ಲಷ್ಟೇ ಸಾಧ್ಯ ಎಂಬುದು ಕೂಡ ಗಮನಾರ್ಹ. ಜೂನ್ 15 ರಂದು ಗುಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಕದನದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಐವತ್ತರಷ್ಟು ಮಂದಿ ಗಾಯಗೊಂಡಿದ್ದರು ಎಂಬ ಮಾಹಿತಿಯೂ ಬರುತ್ತಿದೆ. ಇದು ನಮ್ಮಲ್ಲಿ ಬಹಳ ಗಾಢವಾಗಿ ರೀತಿಯಲ್ಲೇ ಚರ್ಚೆಯಾದಾಗ, ನಮ್ಮ ಪ್ರಧಾನಿ ನರೇಂದ್ರ ...